‘ನೂತನ ತಾಲ್ಲೂಕು ಪಂಚಾಯಿತಿ ಆಡಳಿತ ರಚನೆಯಾಗಿ ಎರಡು ವರ್ಷ ಪೂರೈಸಿದೆ. ಆರು ಬಾರಿ ಸಾಮಾನ್ಯ ಸಭೆ, ಮೂರು ಕೆಡಿಪಿ, ಒಂದು ಬಾರಿ ತ್ರೈಮಾಸಿಕ ಕೆಡಿಪಿ ಸಭೆಗಳನ್ನು ನಡೆಸಲಾಗಿದೆ. ಆದರೆ, ಇದುವರೆಗೂ ಸ್ಥಾಯಿ ಸಮಿತಿ ರಚನೆಗೆ ಅಜೆಂಡಾ ಮಂಡಿಸಿಲ್ಲ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಬಾಷು ರಾಠೋಡ ಅವರ ನಿರ್ಲಕ್ಷ್ಯದಿಂದಾಗಿ ಇದುವರೆಗೂ ಸ್ಥಾಯಿ ಸಮಿತಿ ರಚನೆ ಆಗಿಲ್ಲ. ಆದ್ದರಿಂದ, ಹಿರಿಯ ಅಧಿಕಾರಿಗಳು ಗಮನ ಹರಿಸಿ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.