ಸಪ್ತಾಹದ ಸಹಕಾರ ಸಂಸ್ಥೆಗಳಲ್ಲಿ ವ್ಯಾಪಾರ ಸರಳೀಕರಣ ರಫ್ತು ವೃದ್ಧಿಗಾಗಿ ಜೆಮ್ ಪೋರ್ಟಲ್ ಬಳಕೆ ಕುರಿತು ಸಂವಾದ ನಡೆಯಿತು. ಸಹಕಾರ ಸಪ್ತಾಹವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಡಿ.ಎಸ್. ಸುರೇಶ್ ಉದ್ಘಾಟಿಸಿದರು. ಮತಿಘಟ್ಟ ಸಹಕಾರ ಸಂಘದ ಅಧ್ಯಕ್ಷ ಸಿ.ಪಿ. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಹಕರ ಮಾರಾಟ ಮಹಾಮಂಡಳದ ನಿರ್ದೇಶಕ ಲೋಕಪ್ಪಗೌಡ, ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ದಿವಾಕರ್, ನಿರ್ದೇಶಕ ಕುಶ ಕುಮಾರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಮೇಶ್, ನಿರ್ದೇಶಕ ಶೆಟ್ಟಿಹಳ್ಳಿ ರಾಮಜ್ಜ, ಉಪಾಧ್ಯಕ್ಷೆ ವನಜಾಕ್ಷಿ ಕುಬೇರಪ್ಪ, ನಿರ್ದೇಶಕರಾದ ಸಿ.ಎಚ್. ಕುಶಕುಮಾರ್, ಕೆ.ಎಸ್.ಓಂಕಾರಪ್ಪ, ಆರ್. ದಿನೇಶ್, ಎಸ್.ಜೆ. ಓಂಕಾರಪ್ಪ, ಬಿ. ರಾಜಪ್ಪ, ಬಿ.ಡಿ. ಶ್ರೀನಿವಾಸ್ ಮೂರ್ತಿ, ಸುನಂದ ಶೇಖರಪ್ಪ, ಲಕ್ಷ್ಮಿಬಾಯಿ ತಿಮ್ಮಾನಾಯ್ಕ ಇದ್ದರು.