‘3 ತಿಂಗಳಿಂದ ನಮ್ಮ ತಂಡ ಕುಟುಂಬಗಳ ಹಿತ ಮರೆತು, ಈ ರೋಗದ ಸೋಂಕು ಹರಡದದಂತೆ ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ. ಕೊರೊನಾ ಸಂಕಟದ ಅವಧಿಯಲ್ಲಿ ಹೊರಗಿನ ಜಿಲ್ಲೆ, ರಾಜ್ಯದಿಂದ ಬಂದವರನ್ನು ಗುರುತಿಸಿ ಅವರನ್ನು ಕ್ವಾರಂಟೈನ್ ಮಾಡುವ ಜವಾಬ್ದಾರಿ ಆರೋಗ್ಯ ಇಲಾಖೆ ಮೇಲೆ ಇತ್ತು. ವೈದ್ಯಾಧಿಕಾರಿ ಡಾ.ಪ್ರೇಮ್ ಕುಮಾರ್ ನಿರ್ದೇಶನದಂತೆ ಈವರೆಗೆ ಅಂತಹ 300ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಿ, ಕಳಸಕ್ಕೆ ಕೊರೊನಾ ಸೋಂಕು ಬಾರದಂತೆ ತಡೆದಿದ್ದೇವೆ ಎಂಬ ಹೆಗ್ಗಳಿಕೆ ನಮ್ಮದು’.