ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್–19ನಿಂದಾಗಿ ಶನಿವಾರ ಇಬ್ಬರು ಮೃತಪಟ್ಟಿದ್ದಾರೆ. 89 ಮಂದಿಗೆ ಸೋಂಕು ದೃಢಪಟ್ಟಿದೆ, 35 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಚಿಕ್ಕಮಗಳೂರಿನ ಟಿಪ್ಪುನಗರದ 38 ವರ್ಷದ ಪುರುಷ ಹಾಗೂ ಮೂಡಿಗೆರೆಯ 52 ವರ್ಷದ ಪುರುಷ ಮೃತಪಟ್ಟವರು ಎಂದು ವೈದ್ಯರು ತಿಳಿಸಿದ್ದಾರೆ.
ತಾಲ್ಲೂಕುವಾರು ಸೋಂಕಿತರ ಸಂಖ್ಯೆ: ಚಿಕ್ಕಮಗಳೂರು– 41, ಕಡೂರು– 21, ತರೀಕೆರೆ– 12, ಮೂಡಿಗೆರೆ– 9 ಅಜ್ಜಂಪುರ–3, ನರಸಿಂಹರಾಜಪುರ– 2, ಕೊಪ್ಪ– ಒಬ್ಬರಿಗೆ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ 793 ಸಕ್ರಿಯ ಪ್ರಕರಣಗಳು ಇವೆ.
ಈವರೆಗೆ 599 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 31 ಮಂದಿ (ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟ ಜಿಲ್ಲೆಯ ಇಬ್ಬರು ಸಹಿತ) ಮೃತಪಟ್ಟಿದ್ದಾರೆ. ಜಿಲ್ಲೆಯ ವಿವಿಧೆಡೆ 402 ನಿಯಂತ್ರಿತ ವಲಯ (ಕಂಟೈನ್ಮೆಂಟ್ ಝೋನ್)ಗಳು ಇವೆ. ಈವರೆಗಿನ ಒಟ್ಟು ಪ್ರಕರಣಗಳ ಸಂಖ್ಯೆ 1,456ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಒಟ್ಟು:1456 ದಿನದ ಏರಿಕೆ: 89 ಸಕ್ರಿಯ ಪ್ರಕರಣ: 793 ದಿನದ ಏರಿಕೆ: 52 ಗುಣಮುಖ: 599 ದಿನದ ಏರಿಕೆ: 35 ಸಾವು: 31 ದಿನದ ಏರಿಕೆ: 2