ಚಿಕ್ಕಮಗಳೂರಿನ ದೋಣಿಕಣದಲ್ಲಿ ಏಳು ಮಂದಿಗೆ, ಕಲ್ಯಾಣನಗರದ ಒಬ್ಬರಿಗೆ, ಕೋಟೆಯ ಒಬ್ಬರಿಗೆ, ಹೊಸಮನೆ ಬಡಾವಣೆಯ ಒಬ್ಬರಿಗೆ, ಬೆಳವಾಡಿಯ ಒಬ್ಬರಿಗೆ (ಬೆಂಗಳೂರಿನಿಂದ ಬಂದವರು) , ಉಪ್ಪಳ್ಳಿಯ ಒಬ್ಬರಿಗೆ (ಬೆಂಗಳೂರಿನಿಂದ ಬಂದವರು), ಕಡೂರು ತಾಲ್ಲೂಕು ಚಿಕ್ಕದೇವನೂರಿನ ಇಬ್ಬರಿಗೆ, ಕಡೂರು ತಾಲ್ಲೂಕಿನ ತಿಮ್ಲಾಪುರ–ಪಂಚನಹಳ್ಳಿಯ ಮೂವರಿಗೆ, ಕೆ.ಎಂ.ರಸ್ತೆ ಭಾಗದ ಇಬ್ಬರಿಗೆ, ಕೆವಿ ಕಾಲೊನಿಯ ಒಬ್ಬರಿಗೆ, ಕೊಪ್ಪ ತಾಲ್ಲೂಕಿನ ಹುಲ್ಮಗಿಯ ಒಬ್ಬರಿಗೆ, ಅಜ್ಜಂಪುರದ ಅಂಬೇಡ್ಕರ್ ಬಡಾವಣೆಯ ಒಬ್ಬರಿಗೆ, ಎನ್.ಆರ್.ತಾಲ್ಲೂಕಿನ ಮೆಣಸೂರಿನ ಒಬ್ಬರಿಗೆ (ಹರಿಯಾಣದಿಂದ ಬಂದವರು) ಸೋಂಕು ದೃಢಪಟ್ಟಿದೆ. ಇವರನ್ನು ದೃಢಪಟ್ಟವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋವಿಡ್ ಪತ್ತೆಯಾಗಿರುವ ವಿಧಾನ ಪರಿಷತ್ ಸದಸ್ಯರೊಬ್ಬರು ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.