ಆರ್.ಎಂ.ಸಿ. ಪ್ರಾಂಗಣದ ಮುಂಭಾಗದ ರಸ್ತೆಯಲ್ಲಿರುವ ಈ ಸ್ಮಶಾನಕ್ಕೆ ನಾಗರಿಕರು ಓಡಾಡಲು ರಸ್ತೆ, ಬೀದಿ ದೀಪಗಳ ವ್ಯವಸ್ಥೆಯಿಲ್ಲ. ರೈಲ್ವೆ ಸೇತುವೆ ಕೆಳಗಿನ ರಸ್ತೆಯಲ್ಲಿ ಚರಂಡಿಗಳ ಮೂಲಕ ಹರಿದು ಬರುವ ಕೊಚ್ಚೆ ನೀರು ಇಲ್ಲಿಂದಲೇಹರಿಯುತ್ತಿರುವುದರಿಂದ ಸ್ಥಳದಲ್ಲಿ ದುರ್ನಾತ ಬರುತ್ತಿದ್ದು, ಅನೈರ್ಮಲ್ಯ ಕಾರಣದಿಂದಾಗಿ ಇಲ್ಲಿ ಓಡಾಡುವ ಜನರು ಮೂಗು ಮುಚ್ಚಿಕೊಂಡು ಸಾಗುವ ದೃಶ್ಯ ಕಂಡು ಬರುತ್ತಿದೆ.