ಚಿಕ್ಕಮಗಳೂರು: ನಗರದ ವ್ಯಕ್ತಿಯೊಬ್ಬರಿಗೆ ಚಿನ್ನದ ನಾಣ್ಯ ತೋರಿಸಿ ನಂತರ ತಾಮ್ರದ ನಾಣ್ಯ ಕೊಟ್ಟು ಫೋನ್ ಪೇ ಮೂಲಕ ₹ 5 ಸಾವಿರ ಪಾವತಿಸಿಕೊಂಡು ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ನಗದು, ವಾಹನ, ನಾಣ್ಯ, ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಜಯನಗರದ ಜಿಲ್ಲೆಯ ಹರಪ್ಪನಹಳ್ಳಿ ಶ್ರೀನಿವಾಸ ನಾಯ್ಕ ಅಲಿಯಾಸ್ ಸೀನಾ (21), ಕೋಟಿ ನಾಯ್ಕ ಅಲಿಯಾಸ್ ಕೋಟೇಶ್ ನಾಯ್ಕ (28), ವೆಂಕಟೇಶ ನಾಯ್ಕ, (20) ಬಂಧಿತರು. ₹ 5 ಸಾವಿರ ನಗದು, ಎರಡು ಚಿನ್ನದ ನಾಣ್ಯ, 1.95 ಕೆ.ಜಿ ತ್ರಾಮದ ನಾಣ್ಯಗಳು, ಮೂರು ಮೊಬೈಲ್ ಫೋನ್, ಕಾರು ವಶಪಡಿಸಿಕೊಳ್ಳಲಾಗಿದೆ.
ಏನಿದು ಪ್ರಕರಣ?: ಎಸ್ಟೇಟ್ವೊಂದರಲ್ಲಿ ಹರಪ್ಪನಹಳ್ಳಿಯ ಶ್ರೀನಿವಾಸ ನಾಯ್ಕ ಮತ್ತು ನಗರದ ಕೆ.ಮಹೇಶ್ ಅವರಿಗೆ ಪರಿಚಯವಾಗಿತ್ತು.