‘ಬೆಳಿಗ್ಗೆ ಒಂದೊಂದು ಗಂಟೆ ನಡಿಗೆ ಮತ್ತು ಯೋಗಾಭ್ಯಾಸ, ಸಂಜೆ ಒಂದು ಗಂಟೆ ನಡಿಗೆ ಪಾಲಿಸಿದೆ. ಆಹಾರ ಮಾಮೂಲಿ; ಆದರೆ, ಸೇವನೆ ಪ್ರಮಾಣ ಕಡಿಮೆ ಮಾಡಿದ್ದೆ. ಕಾಳುಮೆಣಸಿನ ಸಾರು ಸೇವನೆ ಹೆಚ್ಚಿತ್ತು. ಕೋವಿಡ್ ಪಾಸಿಟಿವ್ ಬರುವ ಮುಂಚೆಯೇ ಪ್ರತಿರೋಧಕ ಶಕ್ತಿ ವೃದ್ಧಿಗೆ ಡಾ.ಗಿರಿಧರ ಕಜೆ ಅವರ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಒಂದು ಹೊತ್ತಿಗೆ ಒಂದು ಮಾತ್ರೆ ಸೇವಿಸುತ್ತಿದ್ದೆ. ಪ್ರತಿರೋಧಕ ಶಕ್ತಿ ಹೆಚ್ಚಳಕ್ಕೆ ಈ ಮಾತ್ರೆ ಖಂಡಿತ ಸಹಕಾರಿಯಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆ ಅಮೃತ ಬಳ್ಳಿ, ನೆಲ ನೆಲ್ಲಿ ಕಷಾಯ ಸೇವಿಸಿದೆ. ಅರಿಶಿನ ಬೆರೆಸಿದ ಒಂದು ಲೋಟ ಹಾಲನ್ನು ರಾತ್ರಿ ಮಲುಗುವ ಮುನ್ನ ಕುಡಿಯುತ್ತಿದ್ದೆ’ ಎಂದು ತಾವು ಅನುಸರಿಸಿದ ವಿಧಾನ ಹಂಚಿಕೊಂಡರು.