ಜಿಲ್ಲಾಪಂಚಾಯಿತಿ ರವೀಂದ್ರ ಬೆಳವಾಡಿ ಮಾತನಾಡಿ, ಪಠ್ಯದಿಂದ ಬುದ್ಧಿ, ಪಠ್ಯೇತರ ಚಟುವಟಿಕೆಯಿಂದ ಶಕ್ತಿ ದೊರೆಯುತ್ತದೆ. ಭವ್ಯ ಭಾರತದ ನಿರ್ಮಾಣಕ್ಕೆ ಅವರೆರಡು ಅಗತ್ಯ. ಗ್ರಾಮೀಣ ಭಾಗದಲ್ಲಿ ಪ್ರತಿಭಾನ್ವತರಿದ್ದರೂ ಅವರಿಗೆ ಅವಕಾಶ ದೊರೆಯುತ್ತಿಲ್ಲ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯಣ್ಣ ಮಾತನಾಡಿ, ಯುವಪೀಳಿಗೆ ವಿವೇಕಾನಂದರ ಚಿಂತನೆಗಳು, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅಂತರರಾಷ್ಟ್ರೀಯ ಕ್ರೀಡಾಪಟು ಪಿ.ವಿ.ಸಿಂಧು ಅವರಿಂದ ಪ್ರೇರಿತರಾಗಬೇಕು ಎಂದರು.
ಹೆಚ್ಚುವರಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಜಿಲ್ಲಾಪಂಚಾಯಿತಿ ಸದಸ್ಯರಾದ ಬಿ.ಜಿ.ಸೋಮಶೇಖರ್ಪ, ಕವಿತಾಲಿಂಗರಾಜು, ಟೆಕ್ವಾಂಡೋ ಸಂಸ್ಥೆ ತರಬೇತುದಾರ ಗಿರೀಶ್ ಇದ್ದರು.