ಶೋಭಾಯಾತ್ರೆ ನಂತರ ದತ್ತಭಕ್ತರು ದತ್ತಪೀಠಕ್ಕೆ ತೆರಳುವರು. ದತ್ತ ಪಾದುಕೆಗಳ ದರ್ಶನ ಮಾಡುವರು. ಗಿರಿಯಲ್ಲಿ ಧಾರ್ಮಿಕ ಸಭೆ, ಹೋಮ, ಪೂಜಾ ಕೈಂಕರ್ಯ ಜರುಗಲಿವೆ. ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಪುನನ್ ಕಾಶ್ಮೀರ ಸಂಘಟನೆಯ ರಾಷ್ಟ್ರೀಯ ಸಂಚಾಲಕ ರಾಹುಲ್ಕೌಲ್, ಹಿಂದೂ ಜನಜಾಗೃತಿ ವೇದಿಕೆ ಸದಸ್ಯರು, ಅವಧೂತರು, ಸಾಧುಸಂತರು ಪಾಲ್ಗೊಳ್ಳುವರು ಎಂದರು.