ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗೆಯ ಶುದ್ಧಿ

Last Updated 6 ಜೂನ್ 2018, 19:30 IST
ಅಕ್ಷರ ಗಾತ್ರ

ಕಾಶಿಯಲ್ಲಿ ಗಂಗಾ ನದಿ, ಅಲ್ಲಿನ ಸ್ನಾನಘಟ್ಟಗಳು ಇತ್ತೀಚೆಗೆ ಸ್ವಚ್ಛವಾಗಿರುವ ಬಗ್ಗೆ, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಪ್ರಯತ್ನಗಳು ಸಫಲವಾಗಿರುವ ಬಗ್ಗೆ ವಾರಾಣಸಿಯ ಟಿ.ಪಿ. ಸುಭಾಷಿಣಿ ಅವರು ತಮ್ಮದೇ ಆದ ಅನುಭವವನ್ನು ತಿಳಿಸಿರುವುದು (ವಾ.ವಾ., ಜೂನ್‌ 6) ಸಾಮಯಿಕವಾಗಿದೆ.

ನಾನು ಈಗ್ಗೆ ಒಂದು ತಿಂಗಳ ಹಿಂದೆ ಕಾಶಿಯಲ್ಲಿ ಐದು ದಿನ ಗಂಗೆಯ ದಡದಲ್ಲಿರುವ ಕರ್ನಾಟಕ ಛತ್ರದಲ್ಲಿ ವಾಸವಿದ್ದೆ. ಸುಭಾಷಿಣಿ ತಿಳಿಸಿರುವಂತೆ ಗಂಗಾ ತೀರಗಳು ಮೊದಲಿಗಿಂತಲೂ ಶುದ್ಧವಾಗಿವೆ. ಎಲ್ಲಾ ಸ್ನಾನಘಟ್ಟಗಳಲ್ಲೂ ಮೂತ್ರಾಲಯ ಹಾಗೂ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಹಿಂದೆ ಗ್ರಾಮಸಾರವು ದೊಡ್ಡ ಕೊಳವೆಗಳ ಮೂಲಕ ಗಂಗೆಯನ್ನು ಸೇರುತ್ತಿದ್ದ ದೃಶ್ಯವನ್ನು ನಾನು ನೋಡಿದ್ದೇನೆ. ಈಗ ಪರಿಸ್ಥಿತಿ ಬದಲಾವಣೆಯಾಗಿದೆ. ವಯೋವೃದ್ಧರು ಹಾಗೂ ವಿಕಲಾಂಗರು ಮೆಟ್ಟಿಲುಗಳನ್ನು ಇಳಿಯಲು ಹಾಗೂ ಹತ್ತಲು ಅನುಕೂಲವಾಗುವಂತೆ ಯಾಂತ್ರಿಕ ರೋಪ್‌ವೇ ಅಳವಡಿಸಲಾಗಿದೆ. ನದಿಯ ತೀರಗಳಿಗೆ ದನಗಳು ನುಗ್ಗದಂತೆ ಪೈಪುಗಳ ವ್ಯವಸ್ಥೆಯಾಗಿದೆ.

ಆದರೆ, ನದಿಯ ಮೆಟ್ಟಿಲುಗಳನ್ನು ದಾಟಿ ಬಂದರೆ ಕಿರಿದಾದ ಕೊಳಕು ಗಲ್ಲಿಗಳು, ಗೂಡುಗಳನ್ನು ಹೋಲುವ ಮನೆಗಳು, ಅಲ್ಲಿಯೇ ರಸ್ತೆ ಬದಿ ವ್ಯಾಪಾರ ಹಾಗೂ ಉಪಾಹಾರ ಕೇಂದ್ರಗಳು... ಕಿರಿಕಿರಿ ಎನಿಸುತ್ತವೆ. ವಿಶೇಷವೆಂದರೆ ಎಲ್ಲಾ ಊರುಗಳ ರಸ್ತೆ ಬದಿ ವ್ಯಾಪಾರಿಗಳಿಗೆ ಸರ್ವೋಚ್ಚ ನ್ಯಾಯಾಲಯದ ಕೃಪೆಯ ಆದೇಶವಿದೆ. ನ್ಯಾಯಾಲಯವು ತನ್ನ ಈ ನಿರ್ಣಯದ ಬಗ್ಗೆ ಮರು ಪರಿಶೀಲಿಸಲು ಇದು ಸಕಾಲವಾಗಿದೆ. ಕಾಶಿಯ ಜನರಿಗೆ ಸ್ವಚ್ಛತೆಯ ಬಗ್ಗೆ ಪೂರ್ಣ ತಿಳಿವಳಿಕೆ ಹಾಗೂ ಬದ್ಧತೆ ಇಲ್ಲ. ರಸ್ತೆಯ ಬದಿಯಲ್ಲಿ ತ್ಯಾಜ್ಯ ಬಿಸಾಡುತ್ತಾರೆ. ಕವಳ ಉಗಿಯುತ್ತಾರೆ. ಸರ್ಕಾರದ ಪ್ರಯತ್ನದ ಜೊತೆ ಜನರೂ ಕೈಜೋಡಿಸಬೇಕು. ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು. ಇದಕ್ಕಾಗಿ ಸ್ವಯಂ ಸೇವಾ ಸಂಘಗಳು, ಶಾಲಾ– ಕಾಲೇಜುಗಳು, ಮಠ–ಮಂದಿರಗಳು ಪ್ರಯತ್ನಿಸಬೇಕಾದುದು ಕಾಲದ ಕರೆಯಾಗಿದೆ.

ಟಿ.ಎನ್. ಸರಸ್ವತಿ, ತುರುವೇಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT