ಬ್ಯಾಂಕು ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ‘ಎ’ ಶ್ರೇಣೆ ಪಡೆದಿದೆ. ಈ ಸಾಲಿನಲ್ಲಿ ಕಳಸ, ಪಂಚನಹಳ್ಳಿ, ಬುಕ್ಕಾಂಬುದಿ, ಯಗಟಿ, ಅಂತರಘಟ್ಟೆ, ತರೀಕೆರೆ ಕೋಡಿಕ್ಯಾಂಪ್, ದೇವನೂರು, ಕಡೂರಿನ ಎಪಿಎಂಸಿ ಆವರಣದಲ್ಲಿ ಬ್ಯಾಂಕಿನ ಶಾಖೆಗಳನ್ನು ತೆರೆಯಲಾಗಿದೆ. ಮುಂದಿನ ಸಾಲಿಗೆ ಚಿಕ್ಕಮಗಳೂರಿನ ಗೃಹಮಂಡಳಿ ಬಡಾವಣೆ ಸಹಿತ ಜಿಲ್ಲಾಧ್ಯಂತ10 ಶಾಖೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದರು.