<p><strong>ಶೃಂಗೇರಿ:</strong> ‘ಮಲೆನಾಡಿನ ತೋಟ, ಗದ್ದೆಗೆ ಗೊಬ್ಬರ, ತೋಟದಿಂದ ತರುವ ಅಡಿಕೆ, ಕಾಫಿ, ಕಾಳು ಮೆಣಸು ಮತ್ತಿತರ ಬೆಳೆಯನ್ನು ತೋಟದಿಂದ ಸಾಗಿಸಲು ಅನುಕೂಲವಾಗುವಂತೆ ಬ್ಯಾಟರಿ ಚಾಲಿತ ಯಂತ್ರ ಆವಿಷ್ಕರಿಸಲಾಗಿದೆ. ಇದು ರಿಮೋಟ್ನಿಂದ ನಿಯಂತ್ರಿಸಲಾಗಿದ್ದು, ಅಪಘಾತ ಮತ್ತು ಸೋಂಕಿನಿಂದ ಸುತಕ್ಷಿತವಾಗಿದೆ’ ಎಂದು ಉದ್ಯಮಿ ಎಸ್.ಕೆ.ಮಿಥುನ್ ಹೇಳಿದರು.</p>.<p>ಪಟ್ಟಣದ ಮಾನಗಾರಿನ ಹೊಸಮನೆ ತ್ಯಾಗರಾಜ ರಾವ್ ತೋಟದಲ್ಲಿ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಬುಧವಾರ ಆಯೋಜಿಸಿದ್ದ ಬ್ಯಾಟರಿ ಚಾಲಿತ, ರಿಮೋಟ್ ನಿಯಂತ್ರಿತ ಯಂತ್ರದ ಪ್ರಾತ್ಯಕ್ಷಿಕೆಯಲ್ಲಿ ಅವರು ಮಾತನಾಡಿದರು.</p>.<p>500 ಕೆ.ಜಿ ಭಾರ ಹೊರುವ ಸಾಮರ್ಥ್ಯವಿರುವ ಈ ಯಂತ್ರ ಫೋರ್ ವ್ಹೀಲ್ ಚಲನೆ ಹೊಂದಿದೆ. ಇದು ಕೆಸರು, ಜಾರಿಕೆ, ಗುಡ್ಡಗಾಡು ಪ್ರದೇಶದಲ್ಲೂ ಸಮರ್ಥವಾಗಿ ನಿರ್ವಹಿಸಬಹುದಾಗಿದೆ ಎಂದರು.</p>.<p>ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ರಾವ್ ಮಾತನಾಡಿ, ರೈತರು ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಸಾಕಷ್ಟು ಯಂತ್ರೋಪಕರಣದ ಪರಿಚಯವಾಗಿದೆ. ಪವರ್ ಟಿಲ್ಲರ್, ಟ್ರಾಕ್ಟರ್ ಮಾಡುವ ಕೆಲಸವನ್ನು ಈ ಯಂತ್ರ ಮಾಡುತ್ತದೆ ಎಂದರು.</p>.<p>ಪ್ರಾತ್ಯಕ್ಷಿಕೆಯಲ್ಲಿ ರೈತ ಮುಖಂಡರಾದ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಡಿ.ಸಿ.ಶಂಕರಪ್ಪ, ಕಲ್ಕುಳಿ ಚಂದ್ರಶೇಖರ ಹೆಗ್ಡೆ, ಪ್ರವೀಣ್, ಶ್ರೇಯಸ್, ಟಿ.ಕೆ ಪರಾಶರ, ಸತೀಶ್, ಸೀತಾರಾಮ, ತೋಟದ ಕುಂಬ್ರಿ ಸತೀಶ್, ಅವಿನಾಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶೃಂಗೇರಿ:</strong> ‘ಮಲೆನಾಡಿನ ತೋಟ, ಗದ್ದೆಗೆ ಗೊಬ್ಬರ, ತೋಟದಿಂದ ತರುವ ಅಡಿಕೆ, ಕಾಫಿ, ಕಾಳು ಮೆಣಸು ಮತ್ತಿತರ ಬೆಳೆಯನ್ನು ತೋಟದಿಂದ ಸಾಗಿಸಲು ಅನುಕೂಲವಾಗುವಂತೆ ಬ್ಯಾಟರಿ ಚಾಲಿತ ಯಂತ್ರ ಆವಿಷ್ಕರಿಸಲಾಗಿದೆ. ಇದು ರಿಮೋಟ್ನಿಂದ ನಿಯಂತ್ರಿಸಲಾಗಿದ್ದು, ಅಪಘಾತ ಮತ್ತು ಸೋಂಕಿನಿಂದ ಸುತಕ್ಷಿತವಾಗಿದೆ’ ಎಂದು ಉದ್ಯಮಿ ಎಸ್.ಕೆ.ಮಿಥುನ್ ಹೇಳಿದರು.</p>.<p>ಪಟ್ಟಣದ ಮಾನಗಾರಿನ ಹೊಸಮನೆ ತ್ಯಾಗರಾಜ ರಾವ್ ತೋಟದಲ್ಲಿ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಬುಧವಾರ ಆಯೋಜಿಸಿದ್ದ ಬ್ಯಾಟರಿ ಚಾಲಿತ, ರಿಮೋಟ್ ನಿಯಂತ್ರಿತ ಯಂತ್ರದ ಪ್ರಾತ್ಯಕ್ಷಿಕೆಯಲ್ಲಿ ಅವರು ಮಾತನಾಡಿದರು.</p>.<p>500 ಕೆ.ಜಿ ಭಾರ ಹೊರುವ ಸಾಮರ್ಥ್ಯವಿರುವ ಈ ಯಂತ್ರ ಫೋರ್ ವ್ಹೀಲ್ ಚಲನೆ ಹೊಂದಿದೆ. ಇದು ಕೆಸರು, ಜಾರಿಕೆ, ಗುಡ್ಡಗಾಡು ಪ್ರದೇಶದಲ್ಲೂ ಸಮರ್ಥವಾಗಿ ನಿರ್ವಹಿಸಬಹುದಾಗಿದೆ ಎಂದರು.</p>.<p>ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ರಾವ್ ಮಾತನಾಡಿ, ರೈತರು ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಸಾಕಷ್ಟು ಯಂತ್ರೋಪಕರಣದ ಪರಿಚಯವಾಗಿದೆ. ಪವರ್ ಟಿಲ್ಲರ್, ಟ್ರಾಕ್ಟರ್ ಮಾಡುವ ಕೆಲಸವನ್ನು ಈ ಯಂತ್ರ ಮಾಡುತ್ತದೆ ಎಂದರು.</p>.<p>ಪ್ರಾತ್ಯಕ್ಷಿಕೆಯಲ್ಲಿ ರೈತ ಮುಖಂಡರಾದ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಡಿ.ಸಿ.ಶಂಕರಪ್ಪ, ಕಲ್ಕುಳಿ ಚಂದ್ರಶೇಖರ ಹೆಗ್ಡೆ, ಪ್ರವೀಣ್, ಶ್ರೇಯಸ್, ಟಿ.ಕೆ ಪರಾಶರ, ಸತೀಶ್, ಸೀತಾರಾಮ, ತೋಟದ ಕುಂಬ್ರಿ ಸತೀಶ್, ಅವಿನಾಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>