‘ಇಂದಿರಾಗಾಂದಿ ಬಡಾವಣೆ, ಕಲ್ದೊಡ್ಡಿ, ವಾಜಪೇಯಿ ಬಡಾವಣೆಗಳಿಗೆ ನಗರಸಭೆ ವತಿಯಿಂದ ನಿತ್ಯ 4 ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ. ಒಂದು ಮನೆಗೆ ಒಂದು ಬ್ಯಾರೆಲ್ ನೀರು ನೀಡಲಾಗುತ್ತದೆ. ಒಂದು ಟ್ಯಾಂಕರ್ ನೀರು ಒಂದು ರಸ್ತೆಗೆ ಸಾಲುವುದಿಲ್ಲ. ಈ ಬಗ್ಗೆ ಹಲವಾರು ಬಾರಿ ನಗರಸಭೆ ಅಧ್ಯಕ್ಷರು, ಆಯುಕ್ತರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ನಗರಸಭೆ ಸದಸ್ಯೆ ಸುರೇಖಾಸಂಪತ್ರಾಜ್ ದೂರಿದರು.