ನರಸಿಂಹರಾಜಪುರ: ಶರನ್ನವರಾತ್ರಿ ಸೇವಾ ಸಮಿತಿಯ ಆಶ್ರಯದಲ್ಲಿ 24ನೇ ವರ್ಷದ ಶರನ್ನವರಾತ್ರಿ ಮಹೋತ್ಸದ ಅಂಗವಾಗಿ ದೇವಿಯ ಸನ್ನಿಧಿಯಲ್ಲಿ ಇದೇ 3ರಂದು ಸಾಮೂಹಿಕ ದುರ್ಗಾ ಹೋಮ ನಡೆಯಲಿದೆ.
ಭಾನುವಾರ ಬೆಳಿಗ್ಗೆ ತ್ರಿಕಾಲ ಪೂಜೆ ನಡೆಯಿತು. ಸಂಜೆ ಭಾವಸಾರಕ್ಷತ್ರಿಯ ಮಹಿಳಾ ಮಂಡಳಿ, ಸುಂಕದಕಟ್ಟೆ ವಿದ್ಯಾಗಣಪತಿ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ವಿಶೇಷ ಪೂಜೆ ಆಯೋಜಿಸಲಾಗಿತ್ತು.
ಪಟ್ಟಣದ ಹಳೇಪೇಟೆ ಗುತ್ತ್ಯಮ್ಮ ದೇವಸ್ಥಾನದಲ್ಲಿ ಇದೇ 3ರಂದು ಕರ್ಕಿ ರಮಾನಂದ ಭಟ್ ನೇತೃತ್ವದಲ್ಲಿ ದುರ್ಗಾ ಹೋಮ ಆಯೋಜಿಸಲಾಗಿದೆ.