ತಾಲ್ಲೂಕಿನ ಯಗಟಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ರೀಡಾ ಮನೋಭಾವ ದಿಂದ ನಡೆಯುತ್ತಿದ್ದ ಚುನಾವಣೆಗಳೂ ಇಂದು ಪಾವಿತ್ರ್ಯ ಕಳೆದುಕೊಳ್ಳುತ್ತಿವೆ. ಬಹುತೇಕ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಚುನಾವಣೆಯೆಂಬುದನ್ನು ಸ್ವಅಭಿವೃದ್ಧಿ ಸಾಧನವಾಗಿ ಮಾಡಿಕೊಂಡಿರುವುದು ಈ ಅಪಸವ್ಯಗಳಿಗೆ ಕಾರಣ’ ಎಂದು ವಿಷಾದಿಸಿದರು.