ಸ್ಥಳಾಂತರಕ್ಕೆ ಗ್ರಾಮಸ್ಥರ ಒತ್ತಾಯ: ಪ್ರತಿವರ್ಷವೂ ಕಾಡಾನೆಗಳು ಬಂಕೇನ ಹಳ್ಳಿ, ಬಾನಹಳ್ಳಿ, ಕೂಡಹಳ್ಳಿ, ಬಗ್ಗಸಗೋಡು, ಕೆಂಜಿಗೆ ಭಾಗದಲ್ಲಿ ಸಂಚರಿಸುತ್ತಿದ್ದು, ಕಾಫಿ ಮತ್ತಿತರ ಬೆಳೆಗಳನ್ನು ತುಳಿದು ನಾಶಪಡಿಸಿವೆ. ಈ ಸಮಯದಲ್ಲಿ ಫಸಲನ್ನು ತುಳಿದು ಹಾಕಿ ತುಂಬಾ ನಷ್ಟ ಮಾಡುತ್ತಿವೆ. ಇನ್ನು ಈ ಹಿಂದೆ ಕಾಡಾನೆಯಿಂದ ಪ್ರಾಣಹಾನಿಯೂ ಸಂಭವಿಸಿದೆ. ಕಾಡಾನೆ ಓಡಿಸುವುದಕ್ಕಿಂತ ಕಾಡಾನೆ ಸ್ಥಳಾಂತರಗೊಳಿಸಬೇಕೆಂದು ಬಾನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರ ಒಕ್ಕೊರಲ ಆಗ್ರಹವಾಗಿದೆ.