ತರೀಕೆರೆ: ತಾಲ್ಲೂಕಿನ ಸಿಡುಕನಹಳ್ಳಿ, ಗುಳ್ಳದಮನೆ,ಅತ್ತಿಗನಾಳು, ಚಿಕ್ಕತ್ತೂರು, ಜೋಡಿ ಗೋವಿಂದಪುರ ಭಾಗದಲ್ಲಿ ಆನೆಗಳ ಹಾವಳಿಯಿಂದ 25 ಎಕರೆ ಪ್ರದೇಶದಲ್ಲಿ ರೈತರು ಬೆಳೆದ ರಾಗಿ, ಭತ್ತ, ಜೋಳ, ಅಡಿಕೆ, ತೆಂಗಿನ ಬೆಳೆಗಳು ಹಾನಿಗೀಡಾಗಿವೆ. ಆನೆ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ಈ ಭಾಗದ ರೈತರು ಸೋಮವಾರ ತರೀಕೆರೆ ವಲಯ ಅರಣ್ಯಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.