ಗುತ್ತಿ, ಮೂಲರಹಳ್ಳಿ, ದೇವರಮನೆ ಭಾಗಗಳಲ್ಲಿ ನಾಲ್ಕೈದು ದಿನಗಳಿಂದಲೂ ಮೂರು ಕಾಡಾನೆಗಳ ತಂಡ ನಿರಂತರ ವಾಗಿ ದಾಳಿ ನಡೆಸುತ್ತಿವೆ. ಮಂಗಳವಾರ ನಸುಕಿನ ವೇಳೆಯಲ್ಲಿ ಗುತ್ತಿ ಭಾಗದಿಂದ ಮೂಲರಹಳ್ಳಿ ಗ್ರಾಮಕ್ಕೆ ಬಂದ ಕಾಡಾನೆಗಳು, ಗ್ರಾಮದ ಅಶೋಕ್ ಎಂಬುವವರ ಕಾಫಿ ತೋಟದಲ್ಲಿ ತಿರುಗಾಡಿ, ಫಸಲು ಕಟ್ಟಿದ ಕಾಫಿ ಗಿಡ ಗಳನ್ನು ತುಳಿದು ಹಾನಿಗೊಳಿಸಿವೆ. ಬಳಿಕ ಗಣೇಶ್ ಎಂಬುವವರ ಭತ್ತದ ಗದ್ದೆಗೆ ಇಳಿದು ನಾಟಿ ಮಾಡಿದ್ದ ಸುಮಾರು ಒಂದುವರೆ ಎಕರೆ ಭತ್ತದ ಗದ್ದೆಯನ್ನು ನಾಶಗೊಳಿಸಿವೆ. ದೇವರಮನೆ ಗ್ರಾಮದತ್ತ ತೆರಳಿರುವ ಕಾಡಾನೆಗಳು ರಘು, ಮಹೇಶ ಎಂಬುವವರ ಭತ್ತದ ಗದ್ದೆಗಳನ್ನೂ ಹಾಳು ಮಾಡಿವೆ.