ಚಿಕ್ಕಮಗಳೂರು: ತಾಲ್ಲೂಕಿನ ನಿಡುಗೋಡು ಗ್ರಾಮದ ಹೊಡ್ಡಿಹೊಂಬಳ ಕಾಲೋನಿಯ ರಂಗಯ್ಯ(68) ಎಂಬುವರುಕಾಡಾನೆ ದಾಳಿಗೆ ಸಿಲುಕಿ ಸೋಮವಾರ ಮೃತಪಟ್ಟಿದ್ದಾರೆ.
ಮಸಗಲಿ ಅರಣ್ಯ ಪ್ರದೇಶದಲ್ಲಿರಂಗಯ್ಯ ಎಂದಿನಂತೆ ದನ ಮೇಯಿಸಲು ಕಾಡಂಚಿಗೆ ಹೋಗಿದ್ದರು. ಆದರೆಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಮನೆಯವರು ಮತ್ತು ನೆರೆಹೊರೆಯವರು ಹುಡುಕಾಡಿದಾಗ ಶವ ಪತ್ತೆಯಾಗಿದೆ. ಆನೆ ತುಳಿತದ ಗುರುತುಗಳು ದೇಹದಲ್ಲಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಮುದ್ದಣ್ಣ, ಮಲ್ಲಂದೂರು ಠಾಣೆ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ.