ನಾಗರಹೊಳೆಯ ದುಬಾರೆ, ಮತ್ತಿಗೋಡು ಆನೆ ಶಿಬಿರಗಳಿಂದ ಆರು ಸಾಕಾನೆಗಳು ಲಾರಿಗಳಲ್ಲಿ ತರಲಾಗಿದ್ದು, ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ಆರು ಆನೆಗಳು ಕಾರ್ಯಚರಣೆ ನಡೆಸಲಿವೆ. ಇತ್ತೀಚೆಗೆ ಮೂಡಿಗೆರೆ ತಾಲ್ಲೂಕಿನ ಊರುಬಗೆ ಭಾಗದಲ್ಲಿ ಆನೆ ಕಾರ್ಯಾಚರಣೆಗೆ ಆಗಮಿಸಿದ್ದ ತಂಡದಲ್ಲಿ ಇದ್ದ ಆನೆಗಳಲ್ಲಿ ಗೋಪಾಲಸ್ವಾಮಿ ಎಂಬ ಆನೆಯು ವಾರದ ಹಿಂದೆ ಮತ್ತಿಗೋಡು ಅರಣ್ಯದಲ್ಲಿ ಮೃತಪಟ್ಟಿದ್ದು, ಗೋಪಾಲಸ್ವಾಮಿ ಸ್ಥಾನಕ್ಕೆ ಹರ್ಷ ಎಂಬ ಆನೆಯನ್ನು ಕರೆತರಲಾಗಿದೆ ಎಂದು ಮೂಲಗಳು ತಿಳಿಸಿವೆ.