ಚುರುಕುಗೊಳ್ಳಲಿ: ‘ಆನೆ ಸೆರೆಗಾಗಿ ನಡೆಯುತ್ತಿರುವ ಕಾರ್ಯಾಚರಣೆಯು ಚುರುಕುಗೊಳ್ಳಬೇಕು ಎಂದು ತಳವಾರ ಅಶ್ವಥ್ ಒತ್ತಾಯಿಸಿದ್ದಾರೆ. ಆನೆ ಸೆರೆ ಕಾರ್ಯಾಚರಣೆಗಾಗಿ ಲಕ್ಷಾಂತರ ಮೊತ್ತವನ್ನು ವೆಚ್ಚಮಾಡಲಾಗುತ್ತಿದೆ. ಸಾಕಾನೆಗಳು, ಮಾವುತರು, ಅರಣ್ಯ ಸಿಬ್ಬಂದಿ ಸೇರಿದಂತೆ ಹಲವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಕಾರ್ಯಾಚರಣೆಯ ವೇಳೆ ಆನೆ ಕಾಣಿಸಿಕೊಂಡರೂ ಅರಿವಳಿಕೆ ನೀಡದೆ, ಹಿಡಿಯಲು ಸಾಧ್ಯವಾಗುತ್ತಿಲ್ಲ. ಕಾರ್ಯಾಚರಣೆಯ ಗಂಭೀರತೆಯನ್ನು ಅರಿತು ಆನೆಗಳ ಸೆರೆಗೆ ಮುಂದಾಗಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.