ನಾಲ್ಕೈದು ದಿನದಿಂದ ಹೊರಟ್ಟಿ, ಕೆಂಜಿಗೆ, ಖತ್ಲೆಖಾನ್ ಅರಣ್ಯ ಪ್ರದೇಶಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ ಎನ್ನಲಾಗುತಿತ್ತು. ಅದೇ ಕಾಡಾನೆಗಳು ಶನಿವಾರ ಮುಂಜಾನೆ ಬಿದರಹಳ್ಳಿ, ಬಸವನಹಳ್ಳಿ, ಲೋಕವಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ದಾಳಿ ನಡೆಸಿದ್ದು, ಕಾಫಿ ತೋಟದಲ್ಲಿ ತಿರುಗಾಡಿ ಕಾಫಿ ಗಿಡಗಳನ್ನು ನಾಶಗೊಳಿಸಿವೆ. ಅಲ್ಲದೇ ಕಾಫಿ ತೋಟದಲ್ಲಿ ಬೆಳೆದು ನಿಂತಿರುವ ಅಡಿಕೆ, ತೆಂಗು, ಬೈನೆ ಮರಗಳನ್ನು ಉರುಳಿಸಿರುವುದರಿಂದ ಕಾಫಿ ಗಿಡಗಳು ನಾಶಗೊಳಿಸಿವೆ.