ಕುನ್ನಳ್ಳಿ, ದುಂಡುಗ, ಕೆಲ್ಲೂರು, ಹಳಸೆ ಭಾಗಗಳಲ್ಲಿನ ಹಲವು ಕಾಫಿ ತೋಟಗಳಲ್ಲಿ ಓಡಾಡಿ ಕಾಫಿ, ಅಡಿಕೆ, ಬಾಳೆ, ಕಾಳುಮೆಣಸು ಬೆಳೆಯನ್ನು ನಾಶ ಗೊಳಿಸಿವೆ. ಇದುವರೆಗೂ ತಾಲ್ಲೂಕಿನ ಭೈರಾಪುರ, ಹೊಸ್ಕೆರೆ, ಏರಿಕೆ, ತ್ರಿಪುರ, ಕೋಗಿಲೆ, ದೇವರಮನೆ, ಮೂಲರಹಳ್ಳಿ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆ ಗಳು, ಏಕಾಏಕಿ ಕಸಬಾ ಹೋಬಳಿಗೂ ಕಾಲಿಟ್ಟಿರುವುದು ಆತಂಕ ಸೃಷ್ಟಿಸಿದೆ.