ಇದನ್ನು ಗಮನಿಸಿದ ಮಾರಿ ಗದ್ದುಗೆ ವೃತ್ತದ ಯುವಕರಾದ ಮೋಹನ್, ಶ್ರೀನಿವಾಸ್ ಬಾಲಾಜಿ, ಲೋಕೇಶ್, ಸೈಬರ್ ಶಿವು, ನವೀನ್ ಹಾಗೂ ಗೆಳೆಯರು ಸೇರಿ ಮಲೆಯಾಳಂ ಭಾಷೆ ಮಾತಾಡುವ ಕೇರಳದ ಅಡಿಕೆ ವ್ಯಾಪಾರಿ ಪಟ್ಟಣದಲ್ಲಿರುವ ಮಸೂದ್ಗೆ ವಿಷಯ ತಿಳಿಸಿದ್ದಾರೆ. ಯುವಕನೊಂದಿಗೆ ಮಾತನಾಡಿದ ಮಸೂದ್ ತನ್ನ ಫೇಸ್ಬುಕ್ ಖಾತೆಯಲ್ಲಿ ಯುವಕನ ಪೋಟೊ ಹಾಕಿ ಮಾಹಿತಿ ಹಾಕಿದ್ದಾರೆ. ಕೇರಳದ ಸ್ನೇಹಿತರ ಮೂಲಕ ಮಾಹಿತಿ ಪಡೆದ ಯುವಕನ ಕುಟುಂಬದ ಸದಸ್ಯರು ತರೀಕೆರೆ ಶನಿವಾರ ಬಂದು ಆತನನ್ನು ಕರೆದೊಯ್ದಿದ್ದಾರೆ.