ಕಡೂರು: ಗೆದ್ಲೆಹಳ್ಳಿ ಸಮೀಪದ ಪೊಲೀಸ್ ತರಬೇತಿ ಕೇಂದ್ರದ ಎಸ್ಪಿ ಶ್ರೀನಿವಾಸ್ ಅವರ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.
ಶ್ರೀನಿವಾಸ್ ಎಸಿಪಿ ಎಂಬ ಹೆಸರಿನ ಖಾತೆಯನ್ನು ದುರ್ಬಳಕೆ ಮಾಡಿ ಕೊಂಡಿರುವ ಕಿಡಿಗೇಡಿ, ಶ್ರೀನಿವಾಸ್ ಅವರ 40ಕ್ಕೂ ಹೆಚ್ಚು ಸ್ನೇಹಿತರಿಗೆ ‘ದಯವಿಟ್ಟು ಹಣ ಕಳುಹಿಸಿ’ ಎಂಬ ಸಂದೇಶ ಕಳುಹಿಸಿದ್ದಾನೆ.
ಶ್ರೀನಿವಾಸ್ ಅವರಿಗೆ ಸ್ನೇಹಿತರು ಕರೆ ಮಾಡಿ ಈ ಬಗ್ಗೆ ವಿಚಾರಿಸಿದಾಗ ಅಕೌಂಟ್ ಹ್ಯಾಕ್ ಆಗಿರುವುದು ತಿಳಿದು ಬಂದಿದೆ. ಕೂಡಲೇ ಅವರು ಈ ವಿಷಯವನ್ನು ತಮ್ಮ ವಾಟ್ಸ್ಆ್ಯಪ್ನಲ್ಲಿ ಸ್ಟೇಟಸ್ ತಿಳಿಸಿದ್ದಾರೆ.
‘ನನ್ನ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಯಾರೂ ಹಣ ಕಳೆದುಕೊಂಡಿಲ್ಲ’ ಎಂದು ಶ್ರೀನಿವಾಸ್ ಸ್ಟಷ್ಟಪಡಿಸಿದ್ದಾರೆ.