ಚಿಕ್ಕಮಗಳೂರು: ತರೀಕೆರೆ ತಾಲ್ಲೂಕಿನ ಕಾಡಂಚಿನ ಗ್ರಾಮ ರಾಗಿಬಸವನಹಳ್ಳಿಯಜಮೀನಿನಲ್ಲಿ ಕಾಡಾನೆ ತಿವಿದು ರೈತ ಈರಪ್ಪ (65) ಸಾವಿಗೀಡಾಗಿದ್ದಾರೆ.
ಈರಪ್ಪ ಅವರು ಬೆಳೆ ಕಾಯಲು ಹೋಗಿದ್ದಾಗ ಶನಿವಾರ ತಡರಾತ್ರಿ ಅವಘಡ ಸಂಭವಿಸಿದೆ. ಹೊಲಕ್ಕೆ ನುಗ್ಗಿದ ಕಾಡಾನೆ ಗುಡಿಸಲಿಗೆ ದಾಳಿ ಮಾಡಿ ಅವರನ್ನು ಸಾಯಿಸಿದೆ. ಅಡಿಕೆ ಗಿಡ, ರಾಗಿ ಬೆಳೆಯನ್ನು ಹಾನಿ ಮಾಡಿದೆ.
ರೈತ ಈರಪ್ಪ
'ಹೊಲದಲ್ಲಿ ಕಾಡಾನೆ ರೈತನನ್ನು ಸಾಯಿಸಿ, ಗುಡಿಸಲು ಕೆಡವಿದೆ. ಹೊಲದಲ್ಲಿ ಆನೆ ಲದ್ದಿಇಟ್ಟಿದೆ. ಅರಣ್ಯ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡಿದ್ದಾರೆ' ಎಂದು ಹಾದಿಕೆರೆಯ ಗ್ರಾಮಸ್ಥಮಂಜುನಾಥ್ ತಿಳಿಸಿದರು.
'ಸಾವಿಗೀಡಾದ ಈರಪ್ಪ ಅವರ ಕುಟುಂಬಕ್ಕೆ ಈಗ ₹ 5 ಲಕ್ಷ ಪರಿಹಾರ ನೀಡುತ್ತೇವೆ.ಇಲಾಖೆಯಿಂದ ಒಟ್ಟು ₹ 15 ಲಕ್ಷ ಪರಿಹಾರ ಸಿಗಲಿದೆ' ಎಂದು ಭದ್ರಾವತಿ ಅರಣ್ಯವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಶಿವಶರಣಯ್ಯ 'ಪ್ರಜಾವಾಣಿ'ಗೆ ತಿಳಿಸಿದರು.
ಮರಣೋತ್ತರ ಪರೀಕ್ಷೆ ನಡೆದಿದೆ. ಕುಟುಂದವರಿಗೆ ಶವ ಒಪ್ಪಿಸಲಾಗಿದೆ. ಈರಪ್ಪ ಅವರಿಗೆ ಪತ್ನಿ, ಪುತ್ರ ಇದ್ದಾರೆ.