<p><strong>ಚಿಕ್ಕಮಗಳೂರು</strong>: ಅಡುಗೆ ಅನಿಲ ಸಿಲಿಂಡರ್ ಕೊರತೆ ಉಂಟಾಗಿದೆ ಎಂಬ ಆತಂಕದಲ್ಲಿ ಗ್ರಾಹಕರು ಸಿಲಿಂಡರ್ ವಿತರಣಾ ಕೇಂದ್ರಗಳಿಗೆ ಮುಗಿಬಿದ್ದು, ಹೆಚ್ಚುವರಿ ಸಿಲಿಂಡರ್ ಪಡೆಯಲು ಪ್ರಯತ್ನಿಸಿದರು.</p>.<p>ಸದ್ಯಕ್ಕೆ ವಾಣಿಜ್ಯ ಬಳಕೆ ಸಿಲಿಂಡರ್ ಕೊರತೆ ಉಂಟಾಗಿದ್ದರೂ, ನಗರದಲ್ಲಿ ಹೋಟೆಲ್ಗಳು ತೆರೆದಿದ್ದವು. ಶುಕ್ರವಾರ ಮಧ್ಯಾಹ್ನದ ವೇಳೆಗೆ ಸಿಲಿಂಡರ್ ಪೂರೈಕೆಯಾಗಲಿದೆ ಎಂಬ ಮಾಹಿತಿ ಬಂದ ನಂತರ ಹೋಟೆಲ್ ಮಾಲೀಕರು ಕೂಡ ಸಮಾಧಾನವಾಗಿದ್ದಾರೆ.</p>.<p>ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ ಸಿಗುವುದಿಲ್ಲ ಎಂಬ ಭೀತಿಯಿಂದ ಹಲವರು ಬೆಳಿಗ್ಗೆಯಿಂದ ಗ್ಯಾಸ್ ಏಜೆನ್ಸಿ ಕಚೇರಿ ಮತ್ತು ವಿತರಣಾ ಕೇಂದ್ರಗಳ ಬಳಿ ಜಮಾಯಿಸಿದ್ದರು. ಸಿಲಿಂಡರ್ ಸಿಗುವುದಿಲ್ಲ ಎಂಬ ಮಾಹಿತಿ ಆಧರಿಸಿ ಆನ್ಲೈನ್ ಬುಕ್ಕಿಂಗ್ ಮಾಡಲು ಪ್ರಯತ್ನ ನಡೆಸಿದರು.</p>.<p>ಎರಡು ಸಿಲಿಂಡರ್ ಹೊಂದಿದವರಿಗೆ ಒಂದು ತಿಂಗಳ ನಂತರ ಬುಕ್ಕಿಂಗ್ ತೆರೆದುಕೊಳ್ಳಲಿದೆ. ಆದರೆ, ಅನಿಲ ಸಿಗುವುದಿಲ್ಲ ಎಂಬ ಭೀತಿಯಿಂದ ಜನ ಮುಗಿಬಿದ್ದ ಬುಕ್ಕಿಂಗ್ನಲ್ಲಿ ತೊಡಗಿದ್ದಾರೆ. ಇದರಿಂದ ಸರ್ವರ್ ಸಮಸ್ಯೆ ಕೂಡ ಉಂಟಾಗಿ ತಿಂಗಳು ಪೂರ್ಣಗೊಂಡವರೂ ಬುಕ್ಕಿಂಗ್ ಮಾಡಲು ಪರದಾಡಬೇಕಾಯಿತು ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.</p>.<p>ಗೃಹ ಬಳಕೆ, ವಿದ್ಯಾರ್ಥಿ ನಿಲಯ, ಬಿಸಿಯೂಟ ಸೇರಿ ಅಗತ್ಯ ಸೇವೆಗಳಿಗೆ ತೊಂದರೆಯಾಗದಂತೆ ಆದ್ಯತೆ ನೀಡಲಾಗುತ್ತಿದೆ. ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆಯಾಗುವ ಮಾಹಿತಿ ಇದ್ದು, ಸರಬರಾಜಾದರೆ ಸಮಸ್ಯೆ ಇತ್ಯರ್ಥವಾಗಲಿದೆ ಎಂದರು.</p>.<p><strong>ಸಾಲುಗಟ್ಟಿದ ಆಟೊಗಳು</strong></p><p>ನಗರದಲ್ಲಿ ಆಟೊಗಳಿಗೆ ಅನಿಲ ತುಂಬಿಸುವ ಬಂಕ್ಗಳ ಮುಂದೆ ಆಟೊಗಳು ಸಾಲುಗಟ್ಟಿ ನಿಂತಿದ್ದವು. ಗ್ಯಾಸ್ ದರ ಹೆಚ್ಚಳವಾಗಿದ್ದರಿಂದ ಚಾಲಕರು ಕಿರಿಕಿರಿ ಮಾಡಿದರು ಎಂಬ ಕಾರಣಕ್ಕೆ ಕೆಲವೆಡೆ ಬಂಕ್ ಮಾಲೀಕರು ಬಂದ್ ಮಾಡಿದ್ದರು. ಆಟೊ ಚಾಲಕರು ಆಹಾರ ಇಲಾಖೆ ಕಚೇರಿಗೂ ಬಂದು ಮನವಿ ಸಲ್ಲಿಸಿದರು. ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರು. ಮತ್ತೊಂದು ಬಂಕ್ನಲ್ಲಿ ಗ್ಯಾಸ್ ಖಾಲಿಯಾಗಿದ್ದರಿಂದ ಬೇರೆ ಬಂಕ್ಗಳ ಬಳಿಯೂ ಆಟೊಗಳು ಸಾಲುಗಟ್ಟಿ ನಿಲ್ಲಬೇಕಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು</strong>: ಅಡುಗೆ ಅನಿಲ ಸಿಲಿಂಡರ್ ಕೊರತೆ ಉಂಟಾಗಿದೆ ಎಂಬ ಆತಂಕದಲ್ಲಿ ಗ್ರಾಹಕರು ಸಿಲಿಂಡರ್ ವಿತರಣಾ ಕೇಂದ್ರಗಳಿಗೆ ಮುಗಿಬಿದ್ದು, ಹೆಚ್ಚುವರಿ ಸಿಲಿಂಡರ್ ಪಡೆಯಲು ಪ್ರಯತ್ನಿಸಿದರು.</p>.<p>ಸದ್ಯಕ್ಕೆ ವಾಣಿಜ್ಯ ಬಳಕೆ ಸಿಲಿಂಡರ್ ಕೊರತೆ ಉಂಟಾಗಿದ್ದರೂ, ನಗರದಲ್ಲಿ ಹೋಟೆಲ್ಗಳು ತೆರೆದಿದ್ದವು. ಶುಕ್ರವಾರ ಮಧ್ಯಾಹ್ನದ ವೇಳೆಗೆ ಸಿಲಿಂಡರ್ ಪೂರೈಕೆಯಾಗಲಿದೆ ಎಂಬ ಮಾಹಿತಿ ಬಂದ ನಂತರ ಹೋಟೆಲ್ ಮಾಲೀಕರು ಕೂಡ ಸಮಾಧಾನವಾಗಿದ್ದಾರೆ.</p>.<p>ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ ಸಿಗುವುದಿಲ್ಲ ಎಂಬ ಭೀತಿಯಿಂದ ಹಲವರು ಬೆಳಿಗ್ಗೆಯಿಂದ ಗ್ಯಾಸ್ ಏಜೆನ್ಸಿ ಕಚೇರಿ ಮತ್ತು ವಿತರಣಾ ಕೇಂದ್ರಗಳ ಬಳಿ ಜಮಾಯಿಸಿದ್ದರು. ಸಿಲಿಂಡರ್ ಸಿಗುವುದಿಲ್ಲ ಎಂಬ ಮಾಹಿತಿ ಆಧರಿಸಿ ಆನ್ಲೈನ್ ಬುಕ್ಕಿಂಗ್ ಮಾಡಲು ಪ್ರಯತ್ನ ನಡೆಸಿದರು.</p>.<p>ಎರಡು ಸಿಲಿಂಡರ್ ಹೊಂದಿದವರಿಗೆ ಒಂದು ತಿಂಗಳ ನಂತರ ಬುಕ್ಕಿಂಗ್ ತೆರೆದುಕೊಳ್ಳಲಿದೆ. ಆದರೆ, ಅನಿಲ ಸಿಗುವುದಿಲ್ಲ ಎಂಬ ಭೀತಿಯಿಂದ ಜನ ಮುಗಿಬಿದ್ದ ಬುಕ್ಕಿಂಗ್ನಲ್ಲಿ ತೊಡಗಿದ್ದಾರೆ. ಇದರಿಂದ ಸರ್ವರ್ ಸಮಸ್ಯೆ ಕೂಡ ಉಂಟಾಗಿ ತಿಂಗಳು ಪೂರ್ಣಗೊಂಡವರೂ ಬುಕ್ಕಿಂಗ್ ಮಾಡಲು ಪರದಾಡಬೇಕಾಯಿತು ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.</p>.<p>ಗೃಹ ಬಳಕೆ, ವಿದ್ಯಾರ್ಥಿ ನಿಲಯ, ಬಿಸಿಯೂಟ ಸೇರಿ ಅಗತ್ಯ ಸೇವೆಗಳಿಗೆ ತೊಂದರೆಯಾಗದಂತೆ ಆದ್ಯತೆ ನೀಡಲಾಗುತ್ತಿದೆ. ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆಯಾಗುವ ಮಾಹಿತಿ ಇದ್ದು, ಸರಬರಾಜಾದರೆ ಸಮಸ್ಯೆ ಇತ್ಯರ್ಥವಾಗಲಿದೆ ಎಂದರು.</p>.<p><strong>ಸಾಲುಗಟ್ಟಿದ ಆಟೊಗಳು</strong></p><p>ನಗರದಲ್ಲಿ ಆಟೊಗಳಿಗೆ ಅನಿಲ ತುಂಬಿಸುವ ಬಂಕ್ಗಳ ಮುಂದೆ ಆಟೊಗಳು ಸಾಲುಗಟ್ಟಿ ನಿಂತಿದ್ದವು. ಗ್ಯಾಸ್ ದರ ಹೆಚ್ಚಳವಾಗಿದ್ದರಿಂದ ಚಾಲಕರು ಕಿರಿಕಿರಿ ಮಾಡಿದರು ಎಂಬ ಕಾರಣಕ್ಕೆ ಕೆಲವೆಡೆ ಬಂಕ್ ಮಾಲೀಕರು ಬಂದ್ ಮಾಡಿದ್ದರು. ಆಟೊ ಚಾಲಕರು ಆಹಾರ ಇಲಾಖೆ ಕಚೇರಿಗೂ ಬಂದು ಮನವಿ ಸಲ್ಲಿಸಿದರು. ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರು. ಮತ್ತೊಂದು ಬಂಕ್ನಲ್ಲಿ ಗ್ಯಾಸ್ ಖಾಲಿಯಾಗಿದ್ದರಿಂದ ಬೇರೆ ಬಂಕ್ಗಳ ಬಳಿಯೂ ಆಟೊಗಳು ಸಾಲುಗಟ್ಟಿ ನಿಲ್ಲಬೇಕಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>