ಚಿಕ್ಕಮಗಳೂರು: ನಗರದ ಬಾರಲೇನ್ನಲ್ಲಿ ಸಿಗರೇಟಿನಿಂದ ರಾಷ್ಟ್ರಧ್ವಜ ಸುಟ್ಟು, ತೂತಾಗಿಸಿರುವ ಕೃತ್ಯದ ವಿಡಿಯೊ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಸ್ಗರ್ (50) ಎಂಬಾತನನ್ನು ಬಂಧಿಸಲಾಗಿದೆ.
‘ಮನೆ ಬಳಿ ಕಟ್ಟಿದ್ದ ಧ್ವಜವನ್ನು ಸಿಗರೇಟಿನಿಂದ ಸುಟ್ಟು ತೂತಾಗಿಸಲಾಗಿದೆ. ಸಿಗರೇಟು ಸೇದಿ ಸುಡುವ ದೃಶ್ಯ ವಿಡಿಯೊದಲ್ಲಿವೆ. ರಾತ್ರಿ ವೇಳೆ ಕೃತ್ಯ ಎಸಗಲಾಗಿದೆ’ ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
‘ಆರೋಪಿಯು ಬಾರಲೇನ್ ನಿವಾಸಿ. ಬಾಡಿಗೆ ಮನೆಯಲ್ಲಿ ವಾಸ. ಬುಧವಾರ ಬೆಳಿಗ್ಗೆ ನಗರದ ಬಸ್ ನಿಲ್ದಾಣದಲ್ಲಿ ಪತ್ತೆ ಮಾಡಿದ್ದೇವೆ. ಧ್ವಜವನ್ನು ವಶಪಡಿಸಿಕೊಂಡಿದ್ದೇವೆ. ರಾಷ್ಟ್ರ ಗೌರವಕ್ಕೆ ಅಪಮಾನ ಮಾಡಿದ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.