ಜಾವಳಿಯ ಮಲೆಮನೆ ಗ್ರಾಮದಲ್ಲಿ ಮನೆ, ಆಸ್ತಿ ಪಾಸ್ತಿ, ಜಮೀನು ಕಳೆದುಕೊಂಡ ನಿರಾಶ್ರಿತರಿಗೆ ಸರ್ಕಾರ ಪರ್ಯಾಯ ಜಮೀನು ನೀಡುವುದಾಗಿ ಭರವಸೆ ನೀಡಿತ್ತು. ಆದರೆ, 10 ತಿಂಗಳಾದರೂ ಯಾವುದೇ ಬದಲಿ ಜಮೀನು ನೀಡದೇ ನಿರಾಶ್ರಿತರು ಸಂಕಷ್ಟದಲ್ಲೇ ಬದುಕುತ್ತಿದ್ದಾರೆ. ಭರವಸೆಯಲ್ಲಿಯೇ ಕಾಲ ಕಳೆಯುತ್ತಿರುವ ಮಲೆಮನೆ ನಿರಾಶ್ರಿತರ ಬದುಕು ಈಗ ಮುಳ್ಳಿನ ಹಾದಿಯಾಗಿದೆ. ಮಕ್ಕಳಿಗೆ ಶಿಕ್ಷಣ ನೀಡಲು ಪರದಾಡುವಂತಾಗಿದೆ. ಬಾಡಿಗೆ ಕಟ್ಟಲು ಕೂಡ ಹೆಣಗಾಡುತ್ತಿದ್ದು, ಪರ್ಯಾಯ ಜಮೀನು ಸಿಗದೇ, ಇತ್ತ ಇತರ ವ್ಯವಸ್ಥೆಯೂ ಆಗದೇ ಸಂತ್ರಸ್ತರ ಜೀವನ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.