ನರಸಿಂಹರಾಜಪುರ ತಾಲ್ಲೂಕಿನಿಂದ ಅಭಿನವ ಪ್ರತಿಭಾ ವೇದಿಕೆಯ ಅಧ್ಯಕ್ಷ ಅಭಿನವ ಗಿರಿರಾಜ್, ಕಲಾವಿದರಾದ ಮಂಜು.ಎನ್.ಗೌಡ, ಶೆಟ್ಟಿಕೊಪ್ಪ ಮಹೇಶ್, ಸಾರ್ಯ ಗುರುಮೂರ್ತಿ, ದೊಡ್ಡಿನತಲೆ ಕೇಶವ, ಲೋಕೇಶ್, ರಾಮಮೋಹನ, ಸಾಜು, ಮೇಲ್ವಿಚಾರಕಿ ಮಾಲ, ಗ್ರೀಷ್ಮಾ, ಗೀತಾಂಜಲಿ ತಂಡವು ದೆಹಲಿಗೆ ತೆರಳಿ ಎರಡು ದಿನಗಳ ಕಾಲ ಮಲೆನಾಡಿನ ಕಲೆಗಳಾದ ಅಂಟಿಕೆ ಪಿಂಟಿಗೆ, ಗೀಗಿಪದ, ಭಜನೆ, ಭಾವಗೀತೆ, ತತ್ವಪದ, ಲಾವಣಿ, ಜಾನಪದಗೀತೆ ಹಾಡುವುದರ ಮೂಲಕ ಪುನೀತ್ ರಾಜ್ ಕುಮಾರ್ ಅವರಿಗೆ ಗೀತ ನಮನ ಸಲ್ಲಿಸಿತ್ತು.