ಚಿಕ್ಕಮಗಳೂರು: ನಗರದ ಕೋಟೆ ವೃತ್ತದ ಕ್ರಾಸ್ನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಮಹಮ್ಮದ್ ಆಫ್ತಾಬ್ (19) ಎಂಬಾತನನ್ನು ಸಿಇಎನ್ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಮಹಮ್ಮದ್ ಆಫ್ತಾಬ್ ಸಂತೆಮಾರ್ಕೆಟ್ ಪ್ರದೇಶದ ನಿವಾಸಿ.
ಆರೋಪಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಗಾಂಜಾ ಮಾರುತ್ತಿರುವ ಮಾಹಿತಿ ಮೇರೆಗೆ ಬಲೆ ಬೀಸಿದೆವು. 320 ಗ್ರಾಂ ಗಾಂಜಾ ಹಾಗೂ ₹ 500 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಟರಮಕ್ಕಿ ಕೆರೆ ಏರಿ, ತಮಿಳು ಕಾಲೊನಿಯ ಉದ್ಯಾನ, ಸಂತೆ ಮೈದಾನದ ಮೀನು ಮಾರುಕಟ್ಟೆ, ಲಾರಿ ಸ್ಟ್ಯಾಂಡ್ ಬಳಿ ಅಮಲಿನಲ್ಲಿ ತೂರಾಡುತ್ತಿದ್ದ ನಾಲ್ವರು ಸಿಕ್ಕಿದ್ದಾರೆ. ಮಾದಕ ವಸ್ತು ಸೇವನೆ ಮಾಡಿದ್ದಾರೆಯೇ ಎಂಬುದನ್ನು ದೃಢಪಡಿಸಿಕೊಳ್ಳಲು ವೈದ್ಯಕೀಯ ತಪಾಸಣೆ ಮಾಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.