ಕೊಪ್ಪ: ತಾಲ್ಲೂಕಿನ ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿ ದಿಟ್ಟೆಕೊಪ್ಪ ಸಮೀಪದ ದೋಣಿಹಡ್ಲು ನಿವಾಸಿ ಮಂಜುನಾಥ್ ಅವರ 9 ವರ್ಷದ ಪುತ್ರ ಡಿ.ಎಂ.ನಿರಂಜನ್ ಅಂಗವಿಕಲನಾಗಿದ್ದು, ಕುಟುಂಬವು ಸಹಾಯ ಯಾಚಿಸಿದೆ.
ನಿರಂಜನ್ ಕೈ ಕಾಲು ಸ್ವಾಧೀನ ಕಳೆದುಕೊಂಡು ಹಾಸಿಗೆಯಲ್ಲಿದ್ದಾನೆ. ಕೆಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಸಹಜ ಸ್ಥಿತಿಗೆ ಬಂದಿಲ್ಲ. ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಮಂಜುನಾಥ್ ಅಪಘಾತದಿಂದ ಅವರ ಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಕುಟುಂಬ ಸಮಸ್ಯೆ ಎದುರಿಸುತ್ತಿದೆ.
‘ಪುತ್ರ ನಿರಂಜನ್ ಗೆ ಚಿಕಿತ್ಸೆ ಕೊಡಿಸಬೇಕಾಗಿದೆ. ಅಂಗವಿಕಲ ವೇತನ ಸರಿಯಾಗಿ ಸಿಗುತ್ತಿಲ್ಲ’ ಎಂದು ಮಂಜುನಾಥ್ ಅಳಲು ತೋಡಿಕೊಂಡಿದ್ದಾರೆ. ಮಂಜುನಾಥ್ ಅವರನ್ನು 7483500801 ಮೂಲಕ ಸಂಪರ್ಕಿಸಬಹುದು.