‘ಬಿಜೆಪಿ 150 ಸ್ಥಾನ ಗಳಿಸಲು ರಾಜ್ಯದ ಭಾವೈಕ್ಯತೆ ಕದಡಬಾರದು. ಬಿಜೆಪಿ ಮುಖಂಡರನ್ನು ಜೈಲಿಗೆ ಕಳಿಸುವ ಏಕಮಾತ್ರ ಉದ್ದೇಶ ಹೊಂದಿದ ಕಾಂಗ್ರೆಸ್ ಸಮಾಜದ ಸ್ವಾಸ್ಥ್ಯ ಮರೆತಿದೆ. ನಮ್ಮ ರಾಜ್ಯದ ಸಾಮರಸ್ಯ ಕೆಡಿಸುವ ಯತ್ನವನ್ನು ಕಂಡು ನಾವು ಸುಮ್ಮನೆ ಇರಲು ಆಗುತ್ತದೆಯೇ? ಮುಖ್ಯಮಂತ್ರಿ ತುರ್ತಾಗಿ ನಾಡಿನ ಎಲ್ಲ ಧರ್ಮಗಳ ಗುರುಗಳು, ಮಠಾಧೀಶರು, ಧಾರ್ಮಿಕ ಮುಖಂಡರ ಸಭೆ ನಡೆಸಿ ರಾಜ್ಯದಲ್ಲಿ ಸಾಮರಸ್ಯ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡಲೇಬೇಕು’ ಎಂದೂ ಅವರು ಆಗ್ರಹಿಸಿದರು.