ಬೆಳಿಗ್ಗೆ 4 ಗಂಟೆ ಸುಮಾರಿಗೆ ಆರಂಭವಾದ ಮಳೆ 7 ಗಂಟೆವರೆಗೂ ಸುರಿದಿದೆ. ಇದರಿಂದ ಭದ್ರಾ ನದಿಯಲ್ಲಿ ಕೆಂಬಣ್ಣದ ನೀರು ತುಂಬಿ ಹರಿಯುತ್ತಿದೆ. ಅಕ್ಟೋಬರ್ನಲ್ಲಿ ಸುರಿದ ಮಳೆ ಜನರಿಗೆ ಅಚ್ಚರಿ ಮೂಡಿಸಿದೆ. ವಿಜಯದಶಮಿ ದಿನ ಅಡಿಕೆ ಗೊನೆ ಮುಹೂರ್ತ ಮಾಡಿರುವ ಕೃಷಿಕರು ಸದ್ಯದಲ್ಲೇ ಅಡಿಕೆ ಕೊಯ್ಲು ಆರಂಭಿಸುವ ಯೋಚನೆ ಹೊಂದಿದ್ದಾರೆ.