<p><strong>ಶೃಂಗೇರಿ:</strong> ‘ವಿದ್ಯಾರ್ಥಿಗಳಿಗೆ ಸ್ನೇಹ ಸೌಹಾರ್ದದಿಂದ ಜೀವನ ನಡೆಸುವ ವಾಸ್ತವತೆಯನ್ನು ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವು ಕಲಿಸುತ್ತದೆ’ ಎಂದು ಶಾರದಾ ಪೀಠದ ಅಧಿಕಾರಿ ಸತೀಶ್ ಭಟ್ ಹೇಳಿದರು.</p>.<p>ಶೃಂಗೇರಿಯ ಮರ್ಕಲ್ ಗ್ರಾಮ ಪಂಚಾಯಿತಿಯ ಕಿಗ್ಗಾದ ಶ್ರೀಅಭಿನವ ರಾಮಾನಂದ ಸರಸ್ವತಿ ಪ್ರೌಢಶಾಲೆಯಲ್ಲಿ ಜೆ.ಸಿ.ಬಿ.ಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ‘ಯುವಜನರು ಶಿಸ್ತುಬದ್ಧ ಜೀವನ, ಒಗ್ಗಟ್ಟಿನ ಅಗತ್ಯತೆ ಸೇರಿದಂತೆ ಅನೇಕ ವಿಚಾರವನ್ನು ಶಿಬಿರದಿಂದ ಕಲಿಯಬಹುದಾಗಿದೆ’ ಎಂದರು.</p>.<p>ಪ್ರಾಂಶುಪಾಲರಾದ ಎಂ.ಸ್ವಾಮಿ ಮಾತನಾಡಿ, ‘ಶಿಬಿರವು ವಿದ್ಯಾರ್ಥಿಗಳಿಗೆ ಹೊಸತನ ನೀಡುತ್ತದೆ. ಒಂದಷ್ಟು ದಿನ ಮೊಬೈಲ್ ಫೋನ್ನಿಂದ ದೂರವಿದ್ದು, ಜೀವನವಿಡಿ ನೆನಪಿಸಿಕೊಳ್ಳುವ ಘಟನೆಯನ್ನು ಇಲ್ಲಿಂದ ಪಡೆಯುವಿರಿ’ ಎಂದರು.</p>.<p>ಕಾಲೇಜಿನ ಹಿರಿಯ ವಿದ್ಯಾರ್ಥಿ ಕೃಷ್ಣಮೂರ್ತಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಬಹುಮಾನ ವಿತರಿಸಲಾಯಿತು. ಉತ್ತಮ ಸ್ವಯಂ ಸೇವಕಿ ಪ್ರಶಸ್ತಿಯನ್ನು ಸ್ಪರ್ಶ, ನಾಗಶ್ರೀ, ಅಮೃತ, ವರ್ಷ, ಚಂದನ, ಆಪ್ತಿ ಸಹಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.</p>.<p>ಕಾಲೇಜು ಆಡಳಿತ ಮಂಡಳಿಯ ಪುಷ್ಪಾ ಲಕ್ಷ್ಮೀನಾರಾಯಣ, ಕೆ.ಎಂ. ಮಂಜುನಾಥ್, ಕೆ.ಎಂ. ಶ್ರೀನಿವಾಸ್, ತ್ಯಾಗರಾಜ್ ರಾವ್, ಕಿಗ್ಗಾ ದೇವಸ್ಥಾನದ ಮಂಜುನಾಥ್, ಸ್ವಾಗತ ಸಮಿತಿಯ ಪದಾಧಿಕಾರಿ ಎ.ಎಸ್. ನಯನ, ನೂತನ ಕುಮಾರ್, ವಿಠಲ್, ಶಿಬಿರಾಧಿಕಾರಿಗಳಾದ ಎ.ಜಿ. ಪ್ರಶಾಂತ್, ಸಂತೋಷ ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶೃಂಗೇರಿ:</strong> ‘ವಿದ್ಯಾರ್ಥಿಗಳಿಗೆ ಸ್ನೇಹ ಸೌಹಾರ್ದದಿಂದ ಜೀವನ ನಡೆಸುವ ವಾಸ್ತವತೆಯನ್ನು ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವು ಕಲಿಸುತ್ತದೆ’ ಎಂದು ಶಾರದಾ ಪೀಠದ ಅಧಿಕಾರಿ ಸತೀಶ್ ಭಟ್ ಹೇಳಿದರು.</p>.<p>ಶೃಂಗೇರಿಯ ಮರ್ಕಲ್ ಗ್ರಾಮ ಪಂಚಾಯಿತಿಯ ಕಿಗ್ಗಾದ ಶ್ರೀಅಭಿನವ ರಾಮಾನಂದ ಸರಸ್ವತಿ ಪ್ರೌಢಶಾಲೆಯಲ್ಲಿ ಜೆ.ಸಿ.ಬಿ.ಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ‘ಯುವಜನರು ಶಿಸ್ತುಬದ್ಧ ಜೀವನ, ಒಗ್ಗಟ್ಟಿನ ಅಗತ್ಯತೆ ಸೇರಿದಂತೆ ಅನೇಕ ವಿಚಾರವನ್ನು ಶಿಬಿರದಿಂದ ಕಲಿಯಬಹುದಾಗಿದೆ’ ಎಂದರು.</p>.<p>ಪ್ರಾಂಶುಪಾಲರಾದ ಎಂ.ಸ್ವಾಮಿ ಮಾತನಾಡಿ, ‘ಶಿಬಿರವು ವಿದ್ಯಾರ್ಥಿಗಳಿಗೆ ಹೊಸತನ ನೀಡುತ್ತದೆ. ಒಂದಷ್ಟು ದಿನ ಮೊಬೈಲ್ ಫೋನ್ನಿಂದ ದೂರವಿದ್ದು, ಜೀವನವಿಡಿ ನೆನಪಿಸಿಕೊಳ್ಳುವ ಘಟನೆಯನ್ನು ಇಲ್ಲಿಂದ ಪಡೆಯುವಿರಿ’ ಎಂದರು.</p>.<p>ಕಾಲೇಜಿನ ಹಿರಿಯ ವಿದ್ಯಾರ್ಥಿ ಕೃಷ್ಣಮೂರ್ತಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಬಹುಮಾನ ವಿತರಿಸಲಾಯಿತು. ಉತ್ತಮ ಸ್ವಯಂ ಸೇವಕಿ ಪ್ರಶಸ್ತಿಯನ್ನು ಸ್ಪರ್ಶ, ನಾಗಶ್ರೀ, ಅಮೃತ, ವರ್ಷ, ಚಂದನ, ಆಪ್ತಿ ಸಹಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.</p>.<p>ಕಾಲೇಜು ಆಡಳಿತ ಮಂಡಳಿಯ ಪುಷ್ಪಾ ಲಕ್ಷ್ಮೀನಾರಾಯಣ, ಕೆ.ಎಂ. ಮಂಜುನಾಥ್, ಕೆ.ಎಂ. ಶ್ರೀನಿವಾಸ್, ತ್ಯಾಗರಾಜ್ ರಾವ್, ಕಿಗ್ಗಾ ದೇವಸ್ಥಾನದ ಮಂಜುನಾಥ್, ಸ್ವಾಗತ ಸಮಿತಿಯ ಪದಾಧಿಕಾರಿ ಎ.ಎಸ್. ನಯನ, ನೂತನ ಕುಮಾರ್, ವಿಠಲ್, ಶಿಬಿರಾಧಿಕಾರಿಗಳಾದ ಎ.ಜಿ. ಪ್ರಶಾಂತ್, ಸಂತೋಷ ಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>