‘ಸೆ.24ರಂದು ರಾತ್ರಿ ಕೃತ್ಯ ಎಸಗಿದ್ದಾರೆ. ಬೀರೂರಿನ ಗಣಪತಿ ಪೆಂಡಾಲ್ನಲ್ಲಿ ಗಣೇಶೋತ್ಸವದಲ್ಲಿ ಕುಟುಂಬ ಸಮೇತ ಪಾಲ್ಗೊಂಡು ಕಡೂರಿಗೆ ರಾತ್ರಿ 10.30ಕ್ಕೆ ವಾಪಸಾಗಿ ಮನೆ ಮುಂದೆ ಕಾರು ನಿಲ್ಲಿಸಿದ್ದೆ. ಮರುದಿನ (ಭಾನುವಾರ) ಬೆಳಿಗ್ಗೆ ನೋಡಿದಾಗ ಕಾರಿನ ನಾಲ್ಕೂ ಚಕ್ರಗಳ ಗಾಳಿ ತೆಗೆದಿರುವುದು, ಕಾರಿನ ಮೇಲೆ ಗೀಚಿರುವುದು (ಬಾನೆಟ್, ಬಲಭಾಗದ ಬಾಗಿಲ ಮೇಲೆ), ಹಾನಿ ಮಾಡಿರುವುದು ಕಂಡುಬಂದಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.