ಜ್ಯೋತಿನಗರದ ಪ್ಲಾಂಟರ್ಸ್ ಪಾರ್ಕ್ ಬ್ಯಾಡ್ಮಿಂಟನ್ ಅಕಾಡೆಮಿ ಮುಂದೆ ಇರುವ ಪಾರ್ಕ್ ಹದಗೆಟ್ಟಿದೆ. ಗೇಟ್ ಇಲ್ಲ. ಬಿಡಾಡಿಗಳ ಪ್ರಾಣಿಗಳ ಆಶ್ರಯ ತಾಣವಾಗಿದೆ. ಕೆಲ ತಿಂಗಳುಗಳಿಂದ ಮಣ್ಣು ಮಿಶ್ರಿತ ನೀರು ನಳಗಳಲ್ಲಿ ಪೂರೈಕೆಯಾಗುತ್ತದೆ. ನಳಗಳ ನೀರು ಹಾಕಿಡುವ ತೊಟ್ಟಿ, ಡ್ರಮ್ಮು, ಪಾತ್ರೆಗಳ ತಳದಲ್ಲಿ ಮಣ್ಣು, ಕೊಳೆ ಇರುತ್ತದೆ. ಸಂಬಂಧಪಟ್ಟವರಿಗೆ ತಿಳಿಸಿದರೂ ಗಮನಹರಿಸಿಲ್ಲ ಎಂದು ಕುಪ್ಪೇನಹಳ್ಳಿಯ ನಿವಾನಿ ಪಲ್ಲವಿ ಅಳಲು ತೋಡಿಕೊಂಡರು.