<p>ಕಡೂರು: ಸಖರಾಯಪಟ್ಟಣ ಸಮೀಪದ ಅಗ್ರಹಾರ ಗ್ರಾಮದಲ್ಲಿ ಬುಧವಾರ ಶ್ರೀಮಲ್ಲಿಗ್ಯೆಮ್ಮ, ಹೊಂಗ್ಯೆಮ್ಮ ಹಾಗೂ ಶ್ರೀಆಂಜನೇಯ ಸ್ವಾಮಿಯ ಕೆಂಡಾರ್ಚನೆ ಸಹಸ್ರಾರು ಭಕ್ತರ ನಡುವೆ ವಿಜೃಂಭಣೆಯಿಂದ ನಡೆಯಿತು.</p>.<p>ಭಾನುವಾರ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀದೇವಿಯವರಿಗೆ ಹಾಲುವರ್ತಿಯಲ್ಲಿ ಗಂಗಾಪೂಜೆ, ಸೋಮವಾರ ಶ್ರೀಮಲ್ಲಿಕಾರ್ಜುನ ಸ್ವಾಮಿಯವರ ಪರೇವು, ಅಮ್ಮನವರಿಗೆ ವಿಶೇಷ ಉತ್ಸವ ಹಾಗೂ ಬೇವಿನ ಸೀರೆ ಸೇವೆ ನಂತರ ಸಿಡಿ ಕಾರ್ಯಕ್ರಮಗಳು ನಡೆದವು.</p>.<p>ಬುಧವಾರ ಬೆಳಿಗ್ಗೆ ಶ್ರೀದೇವಿಯವರ ದುಗ್ಗಳ ಸೇವೆ ಮತ್ತು ಕೆಂಡಾರ್ಚನೆ ನಡೆಯಿತು. ಅದೇ ದಿನ ರಾತ್ರಿ ಮುತ್ತಿನ ಪಲ್ಲಕ್ಕಿ ಸೇವೆಯನ್ನು ಕಾಳೇಗೌಡ ಕುಟುಂಬದವರು, ನಂತರ ಸಿಡಿಮದ್ದಿನ ಸೇವೆಯನ್ನು ಎಸ್.ವಿ. ಬಸವರಾಜಪ್ಪ ಮತ್ತು ಮಂಜುನಾಥ್ ಸಂಗಡಿಗರು ಏರ್ಪಡಿಸಿದ್ದರು.</p>.<p>ಅಗ್ರಹಾರದ ಎಜಿಆರ್ ಬಾಯ್ಸ್ ಗ್ರಾಮದ ಸ್ವಚ್ಛತೆ, ಅಲಂಕಾರ ಮತ್ತಿತರ ಚಟುವಟಿಕೆಗಳ ನೇತೃತ್ವ ವಹಿಸಿದರೆ, ಗ್ರಾಮಸ್ಥರ ಸಹಕಾರದಿಂದ ದೇವಾಲಯ ಅಲಂಕಾರ, ಪ್ರಸಾದ ವಿನಿಯೋಗ ಮತ್ತಿತರ ಕಾರ್ಯಕ್ರಮಗಳು ಜರುಗಿದವು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-126-1245585215</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಡೂರು: ಸಖರಾಯಪಟ್ಟಣ ಸಮೀಪದ ಅಗ್ರಹಾರ ಗ್ರಾಮದಲ್ಲಿ ಬುಧವಾರ ಶ್ರೀಮಲ್ಲಿಗ್ಯೆಮ್ಮ, ಹೊಂಗ್ಯೆಮ್ಮ ಹಾಗೂ ಶ್ರೀಆಂಜನೇಯ ಸ್ವಾಮಿಯ ಕೆಂಡಾರ್ಚನೆ ಸಹಸ್ರಾರು ಭಕ್ತರ ನಡುವೆ ವಿಜೃಂಭಣೆಯಿಂದ ನಡೆಯಿತು.</p>.<p>ಭಾನುವಾರ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀದೇವಿಯವರಿಗೆ ಹಾಲುವರ್ತಿಯಲ್ಲಿ ಗಂಗಾಪೂಜೆ, ಸೋಮವಾರ ಶ್ರೀಮಲ್ಲಿಕಾರ್ಜುನ ಸ್ವಾಮಿಯವರ ಪರೇವು, ಅಮ್ಮನವರಿಗೆ ವಿಶೇಷ ಉತ್ಸವ ಹಾಗೂ ಬೇವಿನ ಸೀರೆ ಸೇವೆ ನಂತರ ಸಿಡಿ ಕಾರ್ಯಕ್ರಮಗಳು ನಡೆದವು.</p>.<p>ಬುಧವಾರ ಬೆಳಿಗ್ಗೆ ಶ್ರೀದೇವಿಯವರ ದುಗ್ಗಳ ಸೇವೆ ಮತ್ತು ಕೆಂಡಾರ್ಚನೆ ನಡೆಯಿತು. ಅದೇ ದಿನ ರಾತ್ರಿ ಮುತ್ತಿನ ಪಲ್ಲಕ್ಕಿ ಸೇವೆಯನ್ನು ಕಾಳೇಗೌಡ ಕುಟುಂಬದವರು, ನಂತರ ಸಿಡಿಮದ್ದಿನ ಸೇವೆಯನ್ನು ಎಸ್.ವಿ. ಬಸವರಾಜಪ್ಪ ಮತ್ತು ಮಂಜುನಾಥ್ ಸಂಗಡಿಗರು ಏರ್ಪಡಿಸಿದ್ದರು.</p>.<p>ಅಗ್ರಹಾರದ ಎಜಿಆರ್ ಬಾಯ್ಸ್ ಗ್ರಾಮದ ಸ್ವಚ್ಛತೆ, ಅಲಂಕಾರ ಮತ್ತಿತರ ಚಟುವಟಿಕೆಗಳ ನೇತೃತ್ವ ವಹಿಸಿದರೆ, ಗ್ರಾಮಸ್ಥರ ಸಹಕಾರದಿಂದ ದೇವಾಲಯ ಅಲಂಕಾರ, ಪ್ರಸಾದ ವಿನಿಯೋಗ ಮತ್ತಿತರ ಕಾರ್ಯಕ್ರಮಗಳು ಜರುಗಿದವು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-126-1245585215</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>