ಜೇಸಿಐ ಘಟಕದ ಅಧ್ಯಕ್ಷೆ ಮಮತಾ ಮುಕುಂದ ರಾವ್ ಮಾತನಾಡಿ, ‘ಜೀವನಕ್ಕೆ ಅತ್ಯವಶ್ಯಕವಾದ ಜೀವಜಲ ಪೂರೈಸುವ ಜಲಮೂಲಗಳಿಗೆ ಗ್ರಾಮೀಣ ರೈತರು ಗೌರವ ಸಮರ್ಪಣೆ ಮಾಡುವ ನಿಟ್ಟಿನಲ್ಲಿ ಮುತ್ತೈದೆಯರಿಂದ ಬಾಗಿನ ಸಮರ್ಪಿಸುತ್ತಿದ್ದರು. ನಮ್ಮ ನೆಲದ ಸಂಸ್ಕೃತಿ ಮತ್ತು ಗ್ರಾಮೀಣ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ತಾಲ್ಲೂಕಿನ ರೈತರ ಪರವಾಗಿ ಎರಡೂ ಕೆರೆಗಳಿಗೆ ಬಾಗಿನ ಸಮರ್ಪಿಸಲಾಗಿದೆ’ ಎಂದರು.