ಈ ಬಗ್ಗೆ ಹೇಳಿಕೆ ನೀಡಿರುವ ಅವರು, ‘ಆರ್.ಎಂ.ಬಸವರಾಜು ಒಂದು ವರ್ಷದ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ್ದು, ಪೊಲೀಸ್ ದೂರು ದಾಖಲಿಸಲಾಗಿತ್ತು. ಬಳಿಕ ತನಿಖೆ ನಡೆದಿದ್ದು, ಜೊತೆಯಲ್ಲೆ ಬಹಳಷ್ಟು ದಾಖಲೆಗಳು ಸಮರ್ಪಕ ಆಗಿಲ್ಲದಿರುವುದು ಕಂಡು ಬಂದಿದೆ. ಅವರ ಸಾವಿನ ಕಾರಣದ ವೈದ್ಯಕೀಯ ವರದಿ ಸ್ಪಷ್ಟವಾಗಿಲ್ಲ. ಐದು ದಿನಗಳ ನಂತರ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ಒಂದು ವರ್ಷದ ನಂತರ ವೈದ್ಯಕೀಯ ಪರೀಕ್ಷಾ ವರದಿ ನೀಡಲಾಗಿದೆ. ವ್ಯಕ್ತಿಯ ಸಾವಿನ ಬಗ್ಗೆ ವರದಿ ಬರಲು ಒಂದು ವರ್ಷ ಅವಧಿ ಬೇಕೆ? ಪೊಲೀಸರು ನಮ್ಮ ಕುಟುಂಬ ವರ್ಗದವರ ಹೇಳಿಕೆಗಳನ್ನು ಸರಿಯಾಗಿ ಪರಿಗಣಿಸಿಲ್ಲ. ಇದರ ಜೊತೆ ಬಸವರಾಜು ಅವರ ಸ್ವಂತ ಆಸ್ತಿ ವಿಚಾರದಲ್ಲಿ ಸಹ ಬಹಳಷ್ಟು ಗೊಂದಲಗಳು,ಸುಳ್ಳು ದಾಖಲೆಗಳು ಸೃಷ್ಟಿಯಾಗಿವೆ. ಬಹುಶಃ ಯಾರದೋ ಪ್ರಭಾವಕ್ಕೊಳಗಾಗಿ ತನಿಖೆ ದಿಕ್ಕುತಪ್ಪಿದೆ ಎಂಬ ಅನುಮಾನ ಉಂಟಾಗಿದೆ’ ಎಂದು ಅವರು ದೂರಿದರು.