<p>ಕಳಸ: ಇಲ್ಲಿನ ಹೊಸದೇವರ ಚಾವಡಿಯಲ್ಲಿ ಮೂರುದಿನಗಳ ಕಾಲ ನಡೆದ ಗ್ರಾಮ ದೇವರುಗಳ ಆರಾಧನೆ ಮತ್ತು ನೇಮೋತ್ಸವ ಬುಧವಾರ ಬೆಳಿಗ್ಗೆ ಮುಕ್ತಾಯವಾಗಿತು.</p>.<p>ಗ್ರಾಮ ದೇವರ ಭಂಡಾರವನ್ನು ಕಳೆದ ವಾರ ಶ್ಯಾನುಭೋಗರ ಭಂಡಾರದ ಮನೆಯಿಂದ ಹೊಸದೇವರ ಚಾವಡಿಗೆ ಮೆರವಣಿಗೆಯಲ್ಲಿ ಒಯ್ಯಲಾಗಿತ್ತು. ಅರಮನೆಮಕ್ಕಿಯಲ್ಲಿ ಮಾರಿಕಾಂಬಾ ಮಹಾಪೂಜೆ, ಗ್ರಾಮ ದೇವರ ದರ್ಶನ ನಡೆದಿತ್ತು.</p>.<p>ಆನಂತರ ಹೊಸ ದೇವರ ಚಾವಡಿಯಲ್ಲಿ ಪಂಜುರ್ಲಿ ದೈವದ ಪ್ರತಿಷ್ಠೆ, ರಾತ್ರಿ ರಕ್ತೇಶ್ವರಿ, ವಿಷ್ಣುಮೂರ್ತಿ, ಅರಮನೆ ಜಟಿಗ, ರಾಜದೈವದ ನೇಮ, ಉಯ್ಯಾಲೆ ಸೇವೆ, ಹೇಳಿಕೆ– ಕೇಳಿಕೆ ನಡೆದಿತ್ತು.</p>.<p>ಎರಡನೇ ದಿನ ಧೂಮಾವತಿ ದೈವ, ಸೂರ್ಲುಮನೆ ಚೌಡಿ, ಮನಪಂಜುರ್ಲಿ, ಜಟಿಗ ದೈವದ ನೇಮ, ಉಯ್ಯಾಲೆ ಸೇವೆ, ಹೇಳಿಕೆ– ಕೇಳಿಕೆ ನಡೆಯಿತು.</p>.<p>ಮೂರನೇ ದಿನ ಅಡಕೋಡು ಚೌಡಿ, ನಂದಿಕೋಣ, ಬೇಟೆಗಾರ, ವೀರ ಹನುಮಂತ ಮತ್ತು ಪಂಜುರ್ಲಿ ದೈವದ ನೇಮ ಮತ್ತು ಹೇಳಿಕೆ– ಕೇಳಿಕೆ ಜರುಗಿತು. ತಾಲ್ಲೂಕಿನ ವಿವಿಧೆಡೆಯಿಂದ ಬಂದಿದ್ದ ಭಕ್ತಸಮೂಹ ನೇಮೋತ್ಸವದ ಎಲ್ಲ ವಿಧಿಗೆ ಸಾಕ್ಷಿಯಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-126-606305978</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಳಸ: ಇಲ್ಲಿನ ಹೊಸದೇವರ ಚಾವಡಿಯಲ್ಲಿ ಮೂರುದಿನಗಳ ಕಾಲ ನಡೆದ ಗ್ರಾಮ ದೇವರುಗಳ ಆರಾಧನೆ ಮತ್ತು ನೇಮೋತ್ಸವ ಬುಧವಾರ ಬೆಳಿಗ್ಗೆ ಮುಕ್ತಾಯವಾಗಿತು.</p>.<p>ಗ್ರಾಮ ದೇವರ ಭಂಡಾರವನ್ನು ಕಳೆದ ವಾರ ಶ್ಯಾನುಭೋಗರ ಭಂಡಾರದ ಮನೆಯಿಂದ ಹೊಸದೇವರ ಚಾವಡಿಗೆ ಮೆರವಣಿಗೆಯಲ್ಲಿ ಒಯ್ಯಲಾಗಿತ್ತು. ಅರಮನೆಮಕ್ಕಿಯಲ್ಲಿ ಮಾರಿಕಾಂಬಾ ಮಹಾಪೂಜೆ, ಗ್ರಾಮ ದೇವರ ದರ್ಶನ ನಡೆದಿತ್ತು.</p>.<p>ಆನಂತರ ಹೊಸ ದೇವರ ಚಾವಡಿಯಲ್ಲಿ ಪಂಜುರ್ಲಿ ದೈವದ ಪ್ರತಿಷ್ಠೆ, ರಾತ್ರಿ ರಕ್ತೇಶ್ವರಿ, ವಿಷ್ಣುಮೂರ್ತಿ, ಅರಮನೆ ಜಟಿಗ, ರಾಜದೈವದ ನೇಮ, ಉಯ್ಯಾಲೆ ಸೇವೆ, ಹೇಳಿಕೆ– ಕೇಳಿಕೆ ನಡೆದಿತ್ತು.</p>.<p>ಎರಡನೇ ದಿನ ಧೂಮಾವತಿ ದೈವ, ಸೂರ್ಲುಮನೆ ಚೌಡಿ, ಮನಪಂಜುರ್ಲಿ, ಜಟಿಗ ದೈವದ ನೇಮ, ಉಯ್ಯಾಲೆ ಸೇವೆ, ಹೇಳಿಕೆ– ಕೇಳಿಕೆ ನಡೆಯಿತು.</p>.<p>ಮೂರನೇ ದಿನ ಅಡಕೋಡು ಚೌಡಿ, ನಂದಿಕೋಣ, ಬೇಟೆಗಾರ, ವೀರ ಹನುಮಂತ ಮತ್ತು ಪಂಜುರ್ಲಿ ದೈವದ ನೇಮ ಮತ್ತು ಹೇಳಿಕೆ– ಕೇಳಿಕೆ ಜರುಗಿತು. ತಾಲ್ಲೂಕಿನ ವಿವಿಧೆಡೆಯಿಂದ ಬಂದಿದ್ದ ಭಕ್ತಸಮೂಹ ನೇಮೋತ್ಸವದ ಎಲ್ಲ ವಿಧಿಗೆ ಸಾಕ್ಷಿಯಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260416-126-606305978</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>