ಈ ರಸ್ತೆಗೆ ಮಂಜೂರು ಮಾಡುವಷ್ಟು ಅನುದಾನ ಇಲ್ಲ ಎಂದು ಸ್ಥಳೀಯಾಡಳಿತ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಈ ಹಿಂದೆ ರಸ್ತೆಗೆ ಡಾಂಬರೀಕರಣವಾಗಿದ್ದರೂ, ಈಗ ಸಂಪೂರ್ಣ ಹದಗೆಟ್ಟು ಹೋಗಿದೆ ಶೀಘ್ರವೇ ರಸ್ತೆ ನಿರ್ಮಿಸಿ ಎಂದು ಗ್ರಾಮದ ರಾಜೇಶ್, ರಮೇಶ್, ಕೃಷ್ಣಪ್ಪ, ಪರಮೇಶ್, ಲಕ್ಷ್ಮಣಗೌಡ, ಆದರ್ಶ್, ಸಂತೋಷ್, ಕಿರಣ್ ಹೆಗಡೆ ಮತ್ತು ಅನಿಲ್ ಹೆಗಡೆ ಒತ್ತಾಯಿಸಿದರು.