<p><strong>ಚಿಕ್ಕಮಗಳೂರು:</strong> ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಯನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ ಎಂದು ಎಂದು ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸಿ.ರಾಜೇಗೌಡ ಹೇಳಿದರು.</p>.<p>ಆದಿಶಕ್ತಿ ನಗರದಲ್ಲಿ ಜಿಲ್ಲಾ ಕನ್ನಡ ಸೇನೆ ವತಿಯಿಂದ ಭಾನುವಾರ ಆಯೋಜಿಸಿದ್ದ ಆದಿಶಕ್ತಿ ನಗರದ ಘಟಕ ಸ್ಥಾಪನೆ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.</p>.<p>ಭಾಷೆಯನ್ನು ಭದ್ರವಾಗಿಸಲು ಸ್ವಯಂ ಪ್ರೇರಿತರಾಗಿ ಜನ ಭಾಗವಹಿಸಬೇಕು. ಕನ್ನಡ ಸಂಘಟನೆಗಳ ಜತೆಗೆ ಚಲನಚಿತ್ರ ನಟ ಹೆಸರಿನಲ್ಲಿ ಕನ್ನಡ ಸಂಘಟನೆಗಳಿವೆ. ನಾಡು ಕಟ್ಟುವ ಕಾಯಕದಲ್ಲಿ ತೊಡಗಿರುವುದು ಹೆಮ್ಮೆಯ ಸಂಗತಿ ಎಂದರು.</p>.<p>ಸಂತರು, ದಾರ್ಶನಿಕರು, ಲೇಖಕರು ಕನ್ನಡ ಭಾಷೆಯ ಘನತೆಯನ್ನು ಕೀರ್ತನೆ, ವಚನ ಹಾಗೂ ಸಾಹಿತ್ಯದ ಮೂಲಕ ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು.</p>.<p>ರಾಜ್ಯೋತ್ಸವ ಎಂದರೆ ನವೆಂಬರ್ನಲ್ಲಿ ಆಡಂಬರವಾಗಿ ಆಚರಿಸಿ ಸುಮ್ಮನಾಗುವುದಲ್ಲ. ಪ್ರತಿಯೊಬ್ಬರ ದೈನಂದಿನ ವ್ಯವಹಾರ, ವಹಿವಾಟು ಹಾಗೂ ಮನೆ– ಮನಗಳಲ್ಲಿ ನಿತ್ಯವು ಬಳಸುವಂತಾಗಬೇಕು. ಇದರಿಂದ ಬಾಲ್ಯದಿಂದಲೇ ಮಕ್ಕಳಿಗೆ ಎದೆಯಾಳದಲ್ಲಿ ಕನ್ನಡ ಸೊಗಡು ಬೇರೂರಲಿದೆ ಎಂದರು.</p>.<p>ನಾಡಿನ ಭಾಷೆ, ಜಲ, ನೆಲದ ವಿಚಾರದಲ್ಲಿ ಧಕ್ಕೆಯಾದರೆ ಸೇನೆ ಎಂದಿಗೂ ಕೈಕಟ್ಟಿ ಕೂರುವುದಿಲ್ಲ. ಕಾನೂನು ಹೋರಾಟಗಳಿಗೆ ಸದಾ ಸಿದ್ಧವಿರಲಿದೆ. ಆದಿನಗರದ ನೂತನ ಘಟಕವು ಭಾಷೆಯ ಘನತೆ ಹೆಚ್ಚಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು. ಆ</p>.<p>ಆದಿನಗರ ಬಡಾವಣೆ ಘಟಕದ ಅಧ್ಯಕ್ಷರಾಗಿ ಶರತ್, ಫಯಾಜ್ (ಉಪಾಧ್ಯಕ್ಷ), ಶೇಖರ್ (ಕಾರ್ಯದ ರ್ಶಿ), ಉಮೇಶ್, ಸಾದಿಕ್ ಸೇರಿ 20 ಪದಾಧಿಕಾರಿಗಳನ್ನು ಇವೇ ವೇಳೆ ನೇಮಕ ಮಾಡಲಾಯಿತು.</p>.<p>ಕಾರ್ಯಕ್ರಮದಲ್ಲಿ ಕನ್ನಡ ಸೇನೆ ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ, ದಿನಗರದ ಕನ್ನಡ ಸೇನೆ ಅಧ್ಯಕ್ಷ ಶರತ್, ಆಟೊ ಘಟಕದ ಅಧ್ಯಕ್ಷ ಜಯಪ್ರಕಾಶ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಚೈತ್ರಗೌಡ, ಮುಖಂಡರಾದ ಸುನೀಲ್, ಜಗದೀಶ್, ಸತೀಶ್, ಅನ್ವರ್, ಪವನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಯನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ ಎಂದು ಎಂದು ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸಿ.ರಾಜೇಗೌಡ ಹೇಳಿದರು.</p>.<p>ಆದಿಶಕ್ತಿ ನಗರದಲ್ಲಿ ಜಿಲ್ಲಾ ಕನ್ನಡ ಸೇನೆ ವತಿಯಿಂದ ಭಾನುವಾರ ಆಯೋಜಿಸಿದ್ದ ಆದಿಶಕ್ತಿ ನಗರದ ಘಟಕ ಸ್ಥಾಪನೆ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.</p>.<p>ಭಾಷೆಯನ್ನು ಭದ್ರವಾಗಿಸಲು ಸ್ವಯಂ ಪ್ರೇರಿತರಾಗಿ ಜನ ಭಾಗವಹಿಸಬೇಕು. ಕನ್ನಡ ಸಂಘಟನೆಗಳ ಜತೆಗೆ ಚಲನಚಿತ್ರ ನಟ ಹೆಸರಿನಲ್ಲಿ ಕನ್ನಡ ಸಂಘಟನೆಗಳಿವೆ. ನಾಡು ಕಟ್ಟುವ ಕಾಯಕದಲ್ಲಿ ತೊಡಗಿರುವುದು ಹೆಮ್ಮೆಯ ಸಂಗತಿ ಎಂದರು.</p>.<p>ಸಂತರು, ದಾರ್ಶನಿಕರು, ಲೇಖಕರು ಕನ್ನಡ ಭಾಷೆಯ ಘನತೆಯನ್ನು ಕೀರ್ತನೆ, ವಚನ ಹಾಗೂ ಸಾಹಿತ್ಯದ ಮೂಲಕ ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು.</p>.<p>ರಾಜ್ಯೋತ್ಸವ ಎಂದರೆ ನವೆಂಬರ್ನಲ್ಲಿ ಆಡಂಬರವಾಗಿ ಆಚರಿಸಿ ಸುಮ್ಮನಾಗುವುದಲ್ಲ. ಪ್ರತಿಯೊಬ್ಬರ ದೈನಂದಿನ ವ್ಯವಹಾರ, ವಹಿವಾಟು ಹಾಗೂ ಮನೆ– ಮನಗಳಲ್ಲಿ ನಿತ್ಯವು ಬಳಸುವಂತಾಗಬೇಕು. ಇದರಿಂದ ಬಾಲ್ಯದಿಂದಲೇ ಮಕ್ಕಳಿಗೆ ಎದೆಯಾಳದಲ್ಲಿ ಕನ್ನಡ ಸೊಗಡು ಬೇರೂರಲಿದೆ ಎಂದರು.</p>.<p>ನಾಡಿನ ಭಾಷೆ, ಜಲ, ನೆಲದ ವಿಚಾರದಲ್ಲಿ ಧಕ್ಕೆಯಾದರೆ ಸೇನೆ ಎಂದಿಗೂ ಕೈಕಟ್ಟಿ ಕೂರುವುದಿಲ್ಲ. ಕಾನೂನು ಹೋರಾಟಗಳಿಗೆ ಸದಾ ಸಿದ್ಧವಿರಲಿದೆ. ಆದಿನಗರದ ನೂತನ ಘಟಕವು ಭಾಷೆಯ ಘನತೆ ಹೆಚ್ಚಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು. ಆ</p>.<p>ಆದಿನಗರ ಬಡಾವಣೆ ಘಟಕದ ಅಧ್ಯಕ್ಷರಾಗಿ ಶರತ್, ಫಯಾಜ್ (ಉಪಾಧ್ಯಕ್ಷ), ಶೇಖರ್ (ಕಾರ್ಯದ ರ್ಶಿ), ಉಮೇಶ್, ಸಾದಿಕ್ ಸೇರಿ 20 ಪದಾಧಿಕಾರಿಗಳನ್ನು ಇವೇ ವೇಳೆ ನೇಮಕ ಮಾಡಲಾಯಿತು.</p>.<p>ಕಾರ್ಯಕ್ರಮದಲ್ಲಿ ಕನ್ನಡ ಸೇನೆ ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ, ದಿನಗರದ ಕನ್ನಡ ಸೇನೆ ಅಧ್ಯಕ್ಷ ಶರತ್, ಆಟೊ ಘಟಕದ ಅಧ್ಯಕ್ಷ ಜಯಪ್ರಕಾಶ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಚೈತ್ರಗೌಡ, ಮುಖಂಡರಾದ ಸುನೀಲ್, ಜಗದೀಶ್, ಸತೀಶ್, ಅನ್ವರ್, ಪವನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>