ಸಾಹಿತ್ಯ ಪರಿಷತ್ ಸದಸ್ಯ ನವರಾಜು ಎಚ್ ಮಾತನಾಡಿ, 3 ಸಾವಿರ ವರ್ಷಗಳ ಇತಿಹಾಸವನ್ನು ಕನ್ನಡ ಭಾಷೆ ಹೊಂದಿದೆ. ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಮೂಲಕ ಭಾಷಾ ಬೆಳವಣಿಗೆಯನ್ನು ಗುರುತಿಸಿದ್ದಾರೆ. ಕುವೆಂಪು ಕನ್ನಡದ ಸಿರಿವಂತಿಕೆ ಹೆಚ್ಚಿಸಿದ್ದಾರೆ. ಚಾತುರ್ವರ್ಣ ವ್ಯವಸ್ಥೆಯನ್ನು ಹೊಂದಿದ್ದ ಕನ್ನಡಸಾಹಿತ್ಯದಲ್ಲಿ ಶೂದ್ರ ತಪಸ್ವಿ, ಬೆರಳಿಗೆ ಕೊರಳ್, ಜಲಗಾರ ಕೃತಿಗಳ ಮೂಲಕ ಕುವೆಂಪು ಹೊಸ ಪರ್ವವನ್ನೇ ಉದಯಿಸುವಂತೆ ಮಾಡಿದರು ಎಂದರು.