‘ಅಂಗವಿಕಲೆ ಮಹಿಳೆ ವಾಸವಿದ್ದ ಮನೆಯನ್ನು ಶೃಂಗೇರಿಯ ಆರ್ಎಫ್ಒ ಸೂಚನೆಯಂತೆ ಅರಣ್ಯ ಇಲಾಖೆ ಸಿಬ್ಬಂದಿ ನಾಶಪಡಿಸಿದ್ದಾರೆ. ಮಳೆಗಾಲದಲ್ಲಿ ಏಕಾಏಕಿ ಬಂದು ಮನೆ ಕಿತ್ತು ಹಾಕಿದರೆ ಆ ಮಹಿಳೆ ಎಲ್ಲಿಗೆ ಹೋಗಬೇಕು, ಯಾರ ಆಶ್ರಯ ಪಡೆಯಬೇಕು, ಮಹಿಳೆಯನ್ನು ಇಲಾಖೆ ಸಿಬ್ಬಂದಿ ಮನೆಯಿಂದ ಎಳೆದು ಹೊರ ಹಾಕಿರುವುದು ಖಂಡನೀಯ’ ಎಂದು ಕಿಡಿಕಾರಿದರು.