ಡಾ.ಎಸ್.ಅನಂತ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಜ.9ರವರೆಗೆ ವಿದ್ಯಾರ್ಥಿಗಳಿಗೆ ಸಮವಸ್ತ್ರದಲ್ಲಿ ವಿನಾಯಿತಿ ನೀಡಲಾಗಿದೆ. 10ರಂದು ತರಗತಿ ರದ್ದು ಮಾಡಿ, ಬೆಳಿಗ್ಗೆ 11ಕ್ಕೆ ಪೋಷಕರ ಸಭೆ ಕರೆಯಲಾಗಿದೆ. ಅಂದು ಇದ್ದಂತಹ ಪರೀಕ್ಷೆಯನ್ನು 11ಕ್ಕೆ ಮುಂದೂಡಲಾಗಿದೆ. ಪೋಷಕರ ಸಭೆಯಲ್ಲಿ ಶಾಸಕರು, ಡಿವೈಎಸ್ಪಿ, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಲೋಕೋಪಯೋಗಿ ಇಲಾಖೆಯ ಎಇಇ, ತಾಲ್ಲೂಕು ವೈದ್ಯಾಧಿಕಾರಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.