<p>ಕೊಪ್ಪ: ‘ಜಾತಿಯ ಹೆಸರಿನಲ್ಲಿ ಮೇಲು–ಕೀಳು ಎಂಬ ಭೇದ ಭಾವ ತೋರುವುದನ್ನು ನಿಲ್ಲಿಸಿ. ಹಿಂದೂಗಳೆಲ್ಲ ಒಂದು ಎಂದು ಒಗ್ಗಟ್ಟಿನಿಂದ ಬದುಕಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್.ಎಸ್.ಎಸ್) ಪ್ರಚಾರಕ ಅರುಣ್ ಕುಮಾರ್ ತಿಳಿಸಿದರು.</p>.<p>ತಾಲ್ಲೂಕಿನ ಭಂಡಿಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸವಿನಮನೆಯಲ್ಲಿ ಭಾರತೀ ಪ್ರತಿಷ್ಠಾನ ಆಯೋಜಿಸಿದ್ದ ಸಮರಸತಾ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ನಮ್ಮಲ್ಲಿ ಈಗಲೂ ಮೇಲು-ಕೀಳು ಎಂಬ ಭಾವನೆಯಿದ್ದರೆ ದೇಶ ಪ್ರಗತಿಯಾಗುವುದಿಲ್ಲ’ ಎಂದು ಹೇಳಿದರು.</p>.<p>ದೇವಸ್ಥಾನ, ಧಾರ್ಮಿಕ ಕೇಂದ್ರ, ಇನ್ನಿತರ ಸ್ಥಳಗಳಲ್ಲಿ ಅಸ್ಪೃಶ್ಯರಂತೆ ಕಂಡ ಕಾರಣದಿಂದ ದೇಶ ಹಲವು ವರ್ಷಗಳ ಕಾಲ ಗುಲಾಮರಾಗಿರುವ ಪರಿಸ್ಥಿತಿ ನಿರ್ಮಾಣವಾಯಿತು. ವಿದೇಶಿಗರ ಆಕ್ರಮಣದಿಂದ ಗುಡಿ, ಮಂದಿರಗಳನ್ನು ಕಳೆದುಕೊಂಡೆವು. ದೇಶ ಭೌಗೋಳಿಕ ಪ್ರದೇಶ ಕಳೆಕೊಂಡಿತು. ಹಲವರು ಮಾತಾಂತರಕ್ಕೆ ಒಳಗಾದರು ಎಂದರು.</p>.<p>ಯಲಹಂಕದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಅಭಯಾನಂದಾಜೀ ಅಶೀರ್ವಚನ ನೀಡಿ, ಜಾತಿ ಎಂಬ ಪದಗಳನ್ನು ನಾವುಗಳು ಹುಟ್ಟು ಹಾಕಿದ ಪದ. ಸಮಾಜದಲ್ಲಿ ಎಲ್ಲರೂ ಒಂದು ಎಂಬ ಭಾವ ಬರಬೇಕು. ಇಂತಹ ಕಾರ್ಯಕ್ರಮದಿಂದ ಜಾತಿ ಹೊಗಲಾಡಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.</p>.<p>ಉದ್ಯಮಿ ಲಕ್ಷ್ಮಣ್ ನಿರಾಣಿ ಮಾತನಾಡಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಮಾಸ್ತಮ್ಮ ದೇವಿಯ 16ನೇ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.</p>.<p>ಕಲಾ ಹೋಮ, ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮಠ-ಮಂದಿರಗಳಿಗೆ ಉಚಿತವಾಗಿ ತರಕಾರಿ ಸರಬರಾಜು ಮಾಡುವ ಗೋವಿಂದರಾಜು, ಮಾಜಿ ಸೈನಿಕ ಶುಕುರ್ ಅಹಮ್ಮದ್, ಓಟ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ ಕೆ.ಎಸ್.ಸನ್ಮಿತಾ ಅವರನ್ನು ಗೌರವಿಸಲಾಯಿತು.</p>.<p>ಇಂಚರ ಮತ್ತು ಸನ್ಮಿತಾ ಪ್ರಾರ್ಥಿಸಿದರು. ವಾರ್ಷಿಕ ವರದಿಯನ್ನು ಇಂಚರ ವಾಚಿಸಿದರು. ಚೈತನ್ಯ ನಿರೂಪಣೆ ಮಾಡಿದರು. ಭಾರತಿ ಪ್ರತಿಷ್ಠಾನದ ನಿರ್ವಾಹಕ ಟ್ರಸ್ಟಿ ಎಚ್.ಎಸ್.ಶ್ರೀನಿವಾಸ ಮೂರ್ತಿ, ಮಾಸ್ತಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎಸ್.ಕೃಷ್ಣ, ಭಾರತೀ ಪ್ರತಿಷ್ಠಾನದ ಜಗದೀಶ್ ಕಾರಂತ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-126-1508336400</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಪ್ಪ: ‘ಜಾತಿಯ ಹೆಸರಿನಲ್ಲಿ ಮೇಲು–ಕೀಳು ಎಂಬ ಭೇದ ಭಾವ ತೋರುವುದನ್ನು ನಿಲ್ಲಿಸಿ. ಹಿಂದೂಗಳೆಲ್ಲ ಒಂದು ಎಂದು ಒಗ್ಗಟ್ಟಿನಿಂದ ಬದುಕಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್.ಎಸ್.ಎಸ್) ಪ್ರಚಾರಕ ಅರುಣ್ ಕುಮಾರ್ ತಿಳಿಸಿದರು.</p>.<p>ತಾಲ್ಲೂಕಿನ ಭಂಡಿಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸವಿನಮನೆಯಲ್ಲಿ ಭಾರತೀ ಪ್ರತಿಷ್ಠಾನ ಆಯೋಜಿಸಿದ್ದ ಸಮರಸತಾ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ನಮ್ಮಲ್ಲಿ ಈಗಲೂ ಮೇಲು-ಕೀಳು ಎಂಬ ಭಾವನೆಯಿದ್ದರೆ ದೇಶ ಪ್ರಗತಿಯಾಗುವುದಿಲ್ಲ’ ಎಂದು ಹೇಳಿದರು.</p>.<p>ದೇವಸ್ಥಾನ, ಧಾರ್ಮಿಕ ಕೇಂದ್ರ, ಇನ್ನಿತರ ಸ್ಥಳಗಳಲ್ಲಿ ಅಸ್ಪೃಶ್ಯರಂತೆ ಕಂಡ ಕಾರಣದಿಂದ ದೇಶ ಹಲವು ವರ್ಷಗಳ ಕಾಲ ಗುಲಾಮರಾಗಿರುವ ಪರಿಸ್ಥಿತಿ ನಿರ್ಮಾಣವಾಯಿತು. ವಿದೇಶಿಗರ ಆಕ್ರಮಣದಿಂದ ಗುಡಿ, ಮಂದಿರಗಳನ್ನು ಕಳೆದುಕೊಂಡೆವು. ದೇಶ ಭೌಗೋಳಿಕ ಪ್ರದೇಶ ಕಳೆಕೊಂಡಿತು. ಹಲವರು ಮಾತಾಂತರಕ್ಕೆ ಒಳಗಾದರು ಎಂದರು.</p>.<p>ಯಲಹಂಕದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಅಭಯಾನಂದಾಜೀ ಅಶೀರ್ವಚನ ನೀಡಿ, ಜಾತಿ ಎಂಬ ಪದಗಳನ್ನು ನಾವುಗಳು ಹುಟ್ಟು ಹಾಕಿದ ಪದ. ಸಮಾಜದಲ್ಲಿ ಎಲ್ಲರೂ ಒಂದು ಎಂಬ ಭಾವ ಬರಬೇಕು. ಇಂತಹ ಕಾರ್ಯಕ್ರಮದಿಂದ ಜಾತಿ ಹೊಗಲಾಡಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.</p>.<p>ಉದ್ಯಮಿ ಲಕ್ಷ್ಮಣ್ ನಿರಾಣಿ ಮಾತನಾಡಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಮಾಸ್ತಮ್ಮ ದೇವಿಯ 16ನೇ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.</p>.<p>ಕಲಾ ಹೋಮ, ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮಠ-ಮಂದಿರಗಳಿಗೆ ಉಚಿತವಾಗಿ ತರಕಾರಿ ಸರಬರಾಜು ಮಾಡುವ ಗೋವಿಂದರಾಜು, ಮಾಜಿ ಸೈನಿಕ ಶುಕುರ್ ಅಹಮ್ಮದ್, ಓಟ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ ಕೆ.ಎಸ್.ಸನ್ಮಿತಾ ಅವರನ್ನು ಗೌರವಿಸಲಾಯಿತು.</p>.<p>ಇಂಚರ ಮತ್ತು ಸನ್ಮಿತಾ ಪ್ರಾರ್ಥಿಸಿದರು. ವಾರ್ಷಿಕ ವರದಿಯನ್ನು ಇಂಚರ ವಾಚಿಸಿದರು. ಚೈತನ್ಯ ನಿರೂಪಣೆ ಮಾಡಿದರು. ಭಾರತಿ ಪ್ರತಿಷ್ಠಾನದ ನಿರ್ವಾಹಕ ಟ್ರಸ್ಟಿ ಎಚ್.ಎಸ್.ಶ್ರೀನಿವಾಸ ಮೂರ್ತಿ, ಮಾಸ್ತಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎಸ್.ಕೃಷ್ಣ, ಭಾರತೀ ಪ್ರತಿಷ್ಠಾನದ ಜಗದೀಶ್ ಕಾರಂತ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-126-1508336400</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>