ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಶಂಭೈನೂರಿನಲ್ಲಿ ಸಿಡಿಲು ಬಡಿದು 18 ಕುರಿಗಳು ಮೃತಪಟ್ಟಿವೆ.
‘ಸಿಡಿಲಿನ ಶಬ್ಧಕ್ಕೆ ಹಲವಾರು ಕುರಿಗಳು ದಿಕ್ಕಪಾಲಾಗಿ ಓಡಿವೆ. ಚಿತ್ರದುರ್ಗ ಜಿಲ್ಲೆಯ ಮಾರಿಕಣಿವೆಯವರ ಕುರಿಗಳು ಇವು. ಮಂದೆ ನಿಲ್ಲಿಸಲು ಊರುಗಳ ಮೇಲೆ ಬಂದಿದ್ದಾರೆ’ ಎಂದು ಗ್ರಾಮಸ್ಥರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ತರೀಕೆರೆಯಲ್ಲಿ ಬಿರುಸಾಗಿ ಮಳೆಯಾಗಿದೆ. ಬಿ.ಎಚ್ ರಸ್ತೆಯಲ್ಲಿ ನೀರು ಆವರಿಸಿದೆ. ಜನ–ವಾಹನ ಸಂಚಾರ ಪಡಿಪಾಟಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.