ರಾಗಿ ಕಾಳುಕಟ್ಟುವ ಹಂತದಲ್ಲಿದ್ದು, ಇನ್ನೂ ಒಂದೂವರೆ ತಿಂಗಳೊಳಗೆ ಪೂರ್ಣ ಪ್ರಮಾಣದಲ್ಲಿ ತೆನೆ ಕಟ್ಟಲಿದೆ. ತಡವಾಗಿ ಬಿತ್ತನೆ ಮಾಡಿದ ರೈತರ ಹೊಲಗಳಲ್ಲಿ ಬೆಳವಣಿಗೆಯ ಹಂತದಲ್ಲಿ ರುವ ರಾಗಿಗೆ ಈಗ ತೇವಾಂಶದ ಕೊರತೆಯಾಗದಂತೆ ಮಳೆಯ ಅಗತ್ಯವಿದೆ. ಈ ಹಿಂದೆ ಸೆಪ್ಟೆಂಬರ್ 21ರಂದು ಕಡೂರು ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ 1.54 ಸೆಂ.ಮೀ. ಮಳೆಯಾಗಿತ್ತು. ಅದರಂತೆ ಬೀರೂರು (0.9), ಸಖರಾಯಪಟ್ಟಣ(1.9), ಸಿಂಗಟಗೆರೆ (1.3), ಪಂಚನಹಳ್ಳಿ (0.4), ಎಮ್ಮೆದೊಡ್ಡಿ (2.6) ಅಂದು ಮಳೆಯಾಗಿದ್ದೇ ಕೊನೆ.